ಹಿರಿಯ ಕಲಾವಿದ ಶ್ರೀನಿವಾಸ್ಗೆ ಡಾಕ್ಟರೇಟ್
Update: 2018-10-16 17:59 GMT
ಬೆಂಗಳೂರು, ಅ.16: ಹಿರಿಯ ನಟ, ಆಡುಗೋಡಿ ಶ್ರೀನಿವಾಸ್ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸ್ ಅವರಿಗೆ ‘ಡಾಕ್ಟರೇಟ್ ಪ್ರದಾನ’ ಮಾಡಿ ಗೌರವಿಸಲಾಗಿದೆ.
30 ವರ್ಷಕ್ಕೂ ಅಧಿಕ ಕಾಲ ರಂಗಭೂಮಿ, ಕಲಾಸೇವೆಯನ್ನು ಗುರುತಿಸಿದ ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್ ವಿಶ್ವವಿದ್ಯಾಲಯವು, ಹೊಸ ದಿಲ್ಲಿಯಲ್ಲಿ ಆಯೋಜಿಸಿದ್ದ ಸಮರೋಪ ಸಮಾರಂಭದಲ್ಲಿ ಶ್ರೀನಿವಾಸ್ ಅವರಿಗೆ ಡಾಕ್ಟರೇಟ್ ಗೌರವ ನೀಡಿ ಸನ್ಮಾನಿಸಿದೆ.
ಮೂರು ದಶಕಕ್ಕೂ ಹೆಚ್ಚು ಕಾಲ ರಂಗಭೂಮಿ, ಸಿನಿಮಾರಂಗದಲ್ಲಿ ತೊಡಗಿಕೊಂಡಿರುವ ಆಡುಗೋಡಿ ಶ್ರೀನಿವಾಸ್ ಅವರು, ತ್ಯಾಗವನ್ನು ಪ್ರತಿಬಿಂಬಿಸುವ ‘ತ್ಯಾಗಿ ದುರಂತ’ ನಾಟಕವನ್ನು ಬರೋಬ್ಬರಿ 550ಕ್ಕೂ ಅಧಿಕ ಬಾರಿ ದೇಶದೆಲ್ಲೆಡೆ ಪ್ರದರ್ಶಿಸಿ, ಖ್ಯಾತರಾಗಿದ್ದಾರೆ. ಜೊತೆಗೆ ಸಿನಿಮಾ ನಿರ್ದೇಶನ, ನಾಟಕಗಳನ್ನು ರಚನೆ ಮಾಡಿ ಸಣ್ಣ ಪಾತ್ರದಲ್ಲಿ ಅಭಿನಯಿಸುವುದರ ಮೂಲಕ ನಟನಾಗಿ ಗುರುತಿಸಿಕೊಂಡಿದ್ದಾರೆ.