ಸಂಜೆ 4 ಗಂಟೆಗೆ ತೋಂಟದಾರ್ಯ ಶ್ರೀಗಳ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ

Update: 2018-10-21 08:20 GMT

ಗದಗ, ಅ.21: ಶನಿವಾರ ನಿಧನರಾದ ಗದಗದ ತೋಂಟದಾರ್ಯ  ಡಾ.ಸಿದ್ದಲಿಂಗ  ಶ್ರೀಗಳ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ರವಿವಾರ ಸಂಜೆ 4 ಗಂಟೆಗೆ ನಡೆಯಲಿದೆ.

ತೋಂಟದಾರ್ಯ  ಶ್ರೀಗಳ ಪಾರ್ಥಿವ ಶರೀರದ   ಮೆರವಣಿಯು ರದ್ಧಾಗಿದೆ. ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ, , ಮಾಜಿ ಪ್ರಧಾನಿ  ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು  ಶ್ರೀ  ಸಿದ್ದಲಿಂಗ ಶ್ರೀಗಳ ಪಾರ್ಥಿವ ಶರೀರದ ಅಂತಿಮ  ದರ್ಶನ ಪಡೆದರು.

ಉತ್ತರಾಧಿಕಾರಿ ಆಯ್ಕೆ : ಡಾ.ಸಿದ್ದಲಿಂಗ ಮಹಾಸ್ವಾಮಿ ವಿಧಿವಶರಾದ  ಹಿನ್ನೆಲೆಯಲ್ಲಿ ತೋಂಟದಾರ್ಯಮಠದ 20ನೇ ಪೀಠಾಧಿಪತಿಯಾಗಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಮಹಾಸ್ವಾಮಿ  ಆಯ್ಕೆಯಾಗಿದ್ದಾರೆ.
ತಮ್ಮ ಬಳಿಕ ಮಠದ ಉತ್ತರಾಧಿಕಾರಿಯಾಗಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಅವರನ್ನೇ ನೇಮಿಸಬೇಕೆಂದು 15 ವರ್ಷದ ಹಿಂದೆಯೇ ಶ್ರೀ ಸಿದ್ದಲಿಂಗ ಶ್ರೀಗಳು ವಿಲ್ ಬರೆದಿಟ್ಟಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News