ಓ ಮೆಣಸೇ...

Update: 2018-10-22 07:06 GMT

ಸುಳ್ಳುಗಳಿಗೆ ಕೈಕಾಲುಗಳಿರುವುದಿಲ್ಲ - ಎಂ.ಜೆ.ಅಕ್ಬರ್, ಕೇಂದ್ರ ಸಚಿವ
►ನಾಚಿಕೆಯಂತೂ ಇರುವುದೇ ಇಲ್ಲ.

---------------------

ವಿದೇಶಗಳ ವಿಶ್ವವಿದ್ಯಾನಿಲಯಗಳಿಗೆ ಸಾವಿರ ರೂ. ಕೊಟ್ಟರೆ ಯಾರಿಗೆ ಬೇಕಾದರೂ ಡಾಕ್ಟರೇಟ್ ಸಿಗುತ್ತದೆ -ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

►ದೇಶದೊಳಗೆ ಅದು 500ಕ್ಕೆ ಬಿಕರಿಯಾಗುತ್ತಿದೆ.

---------------------

ಶ್ವೇತಭವನ ಒಂದು ಅತ್ಯಂತ ವಂಚನಾ ಹಾಗೂ ದುಷ್ಟ ಜಗತ್ತಾಗಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
►ನೀವು ಅದರೊಳಗೆ ಪ್ರವೇಶಿಸಿದಾಗಲೇ ಜಗತ್ತಿಗೆ ಗೊತ್ತಾಗಿ ಬಿಟ್ಟಿದೆ.

---------------------
ಡಿಕೆಶಿ ಹುಲಿ ಇದ್ದಂತೆ, ಶ್ರೀರಾಮುಲು ಅಂತಹ ಹುಲಿಯ ಬಾಯಿಗೆ ಕೈ ಹಾಕಲು ಹೋಗಬಾರದು -ಆಂಜನೇಯ, ಕಾಂಗ್ರೆಸ್ ನಾಯಕ
►ಅಂತಹ ಅಪಾಯಕಾರಿ ಪ್ರಾಣಿಗಳನ್ನು ಪಕ್ಷದೊಳಗೆ ಯಾಕಿಟ್ಟುಕೊಂಡಿದ್ದೀರಿ?

---------------------

ಸೂಟು-ಬೂಟು ಧರಿಸದವರು ಮೋದಿಗೆ ಭಾಯಿ ಅಲ್ಲ - ರಾಹುಲ್ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

►ಸದ್ಯಕ್ಕೆ ಬಾಯಿಯೇ ಮೋದಿಯ ಆಸ್ತಿ.

---------------------
ಶ್ರೀರಾಮುಲು ನನ್ನ ಆತ್ಮೀಯ ಗೆಳೆಯ , ನನ್ನ ಮೇಲೆ ಪ್ರೀತಿ ಜಾಸ್ತಿಯಾಗಿ ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ ಅಷ್ಟೆ -ಡಿ.ಕೆ.ಶಿವಕುಮಾರ್, ಸಚಿವ

►ಜೊತೆ ಜೊತೆಯಲಿ ಬಾಳುವ ಕನಸೇ?

---------------------

ನಾವು ಆಪರೇಶನ್ ಮಾಡಬೇಕು ಎಂದಿದ್ದರೆ ಯಾವಾಗಲೋ ಮಾಡಿ ಮುಗಿಸುತ್ತಿದ್ದೆವು - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
►ರೋಗಿಯ ಸ್ಥಿತಿ ಊಹಿಸಿದರೆ ಭಯವಾಗುತ್ತೆ.

---------------------

ಒಳ್ಳೆಯ ಹಿಂದೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹೇಳಲ್ಲ - ಶಶಿ ತರೂರ್, ಸಂಸದ
►ಗಾಂಧೀಜಿ ಒಳ್ಳೆಯ ಹಿಂದೂ ಆಗಿದ್ದರು.

---------------------

ದೇಶ ಆಳುವವರು ದೇಶ ಅಂದರೆ ಆದೇಶವಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು - ಚಂದ್ರಶೇಖರ ಪಾಟೀಲ, ಸಾಹಿತಿ
►ಮತ್ತೆ ಯಾವ ದೇಶ ಎಂದು ತಿಳಿದುಕೊಳ್ಳಬೇಕು?

---------------------

ಟಿಪ್ಪು ಜಯಂತಿ ಆಚರಣೆ ಮೂಲಕ ಸರಕಾರ ಕೊಲೆ ದಂಗೆಗೆ ಪ್ರಚೋದನೆ ನೀಡುತ್ತಿದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
►ಅಂತೂ ಕೊಲೆ ದಂಗೆ ಮಾಡಲು ನಿಮಗೆ ಪ್ರಚೋದನೆ ಸಿಕ್ಕಿದೆ ಎಂದಾಯಿತು.

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲ್ಲಿಲ್ಲದ ಹಾವು - ಶೋಭಾ ಕರಂದ್ಲಾಜೆ, ಸಂಸದೆ
►ನಿಮ್ಮನ್ನು ಕಚ್ಚಿದ್ದು ಯಾವಾಗ ಎಂದು ಹೇಳಿದರೆ, ಮೀಟೂ ಚಳವಳಿಗೆ ಹೊಸ ಸೇರ್ಪಡೆಯಾದೀತು.

---------------------

ಬಿಜೆಪಿಯ ಯಾವ ಬಾಂಬೂ ಸಿಡಿಯುವುದಿಲ್ಲ - ಈಶ್ವರ್‌ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
►ಸಿಡಿಯುವ ಬಾಂಬ್‌ಗಾಗಿ ಅವರದೇ ಸನಾತನಸಂಸ್ಥೆ ಎನ್ನುವ ಸ್ವತಂತ್ರ ಘಟಕ ಇದೆ.

---------------------
ಉಪ ಚುನಾವಣೆ ರಾಜಕೀಯದ ದಿಕ್ಕು ಬದಲಿಸಲಿದೆ - ಆಸ್ಕರ್ ಫೆರ್ನಾಂಡಿಸ್, ರಾಜ್ಯ ಸಭಾ ಸದಸ್ಯ,

►ವೃದ್ಧಾಶ್ರಮದೆಡೆಗೆ ಇರಬಹುದೇ?

---------------------

ಅಧಿಕಾರ ಇರಲಿ ಇಲ್ಲದಿರಲಿ, ಉಸಿರು ಇರುವವರೆಗೆ ಜನಸೇವೆ ಮಾಡಲು ನಾನು ಬದ್ಧ - ಪ್ರಮೋದ್ ಮಧ್ವರಾಜ್, ಮಾಜಿ ಸಚಿವ
►ಅಧಿಕಾರ ನಿಂತಾಗ ಕೆಲವರ ಉಸಿರೂ ನಿಂತು ಬಿಡುತ್ತದೆ.

---------------------

ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂ ನಿಷೇಧಿಸಿದಾಗ ಸ್ವಾಗತಿಸಿದವರು ಈಗ ಶಬರಿಮಲೆ ಕುರಿತ ತೀರ್ಪನ್ನು ವಿರೋಧಿಸುವುದು ಸರಿಯಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
►ಆರೆಸ್ಸೆಸ್ ಎಂದ ಮೇಲೆ ಹಾಗೆಯೇ ಇರಬೇಕಾಗುತ್ತದೆ.

---------------------

ಭಾರತದ ಪ್ರಗತಿಗೆ ಪ್ರಬಲ ನಾಯಕತ್ವದ ಅಗತ್ಯವಿದೆ - ಅರುಣ್‌ಜೇಟ್ಲಿ, ಕೇಂದ್ರ ಸಚಿವ

►ಅಂದರೆ ಮೋದಿ ಪ್ರಬಲ ನಾಯಕರಲ್ಲ ಎನ್ನುತ್ತೀರಾ?

---------------------

ಬಿಜೆಪಿ ಸರಕಾರ ರಚಿಸಲು ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ಕಳೆದ ವಿಧಾನಾ ಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ
- ಶ್ರೀರಾಮುಲು, ಶಾಸಕ

►ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಒಂದೇ ಕ್ಷೇತ್ರದಲ್ಲಿ ಶಾಸಕನಾಗಲು ಸಾಧ್ಯ ಎನ್ನುವುದನ್ನು ಯಾರೂ ತಿಳಿಸಿರಲಿಲ್ಲವೇ?

---------------------

ಮುಖ್ಯಮಂತ್ರಿ ಕುಮಾರಸ್ವಾಮಿಗಿಂತ ನಮಗೆ ನಮ್ಮ ಪಕ್ಷ ಮುಖ್ಯ -ಚೆಲುವರಾಯಸ್ವಾಮಿ, ಮಾಜಿ ಸಚಿವ
►ನಿಮ್ಮ ಪಕ್ಷ ಯಾವುದು ಎನ್ನುವುದನ್ನಾದರೂ ಸ್ಪಷ್ಟಪಡಿಸಿ.

---------------------

ಉಪ ಚುನಾವಣೆ ನಂತರ ಸರಕಾರ ಇನ್ನಷ್ಟು ಗಟ್ಟಿಯಾಗಲಿದೆ- ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
►ಮೋದಿ ಸರಕಾರವೇ?

---------------------

ಯಾವ ಯಾವ ಜಯಂತಿಗಳಿವೆಯೋ ಅವೆಲ್ಲವನ್ನೂ ಮಾಡುತ್ತೇವೆ - ಎಚ್.ಡಿ.ರೇವಣ್ಣ, ಸಚಿವ

►ನಟಿ ಜಯಂತಿಯವರ ಜಯಂತಿಯೂ ಇದರಲ್ಲಿ ಸೇರ್ಪಡೆಯಾಗುತ್ತದೆಯೇ?

---------------------

ರಾಮ ನಡೆದ ಹಾದಿ ಇನ್ನೂ ನಮಗೆ ಮಾರ್ಗದರ್ಶಕ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
►ವನವಾಸಕ್ಕೆ ನಡೆದ ಹಾದಿಯೇ?

---------------------

ಇನ್ನು ಮುಂದೆ ನಾನು ಜಾತಿ-ಧರ್ಮದ ವಿಚಾರದಲ್ಲಿ ತಲೆ ಹಾಕುವುದಿಲ್ಲ- ಡಿ.ಕೆ.ಶಿವಕುಮಾರ್, ಸಚಿವ
►ತಲೆ ಹಾಕುವ ವಿಚಾರಗಳ ಪಟ್ಟಿಯನ್ನಾದರೂ ಕೊಡಿ.

---------------------

ಮೋದಿ ಪ್ರಧಾನಿಯಾಗಿದ್ದು ಪರಿಶ್ರಮದಿಂದ - ಶಾಸಕ ಸಿ.ಟಿ. ರವಿ.
►ಗುಜರಾತ್ ಗಲಭೆಗಾಗಿ ಅವರು ಪಟ್ಟ ಪರಿಶ್ರಮ ಜಗತ್ತಿಗೇ ಗೊತ್ತು.
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...