ಉಪಚುನಾವಣೆಗೆ ಜೆಡಿಎಸ್ ಉಸ್ತುವಾರಿಗಳ ನೇಮಕ
Update: 2018-10-22 16:36 GMT
ಬೆಂಗಳೂರು, ಅ. 22: ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶಿವಮೊಗ್ಗಕ್ಕೆ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಬಳ್ಳಾರಿಗೆ ಟಿ.ಎ.ಶರವಣ ಹಾಗೂ ರಾಮನಗರ ಕ್ಷೇತ್ರಕ್ಕೆ ಪಿಜಿಆರ್ ಸಿಂಧ್ಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಜಮಖಂಡಿ: ಮಾಜಿ ಶಾಸಕರಾದ ಕೋನರೆಡ್ಡಿ, ಎಚ್.ಎಸ್.ಶಿವಶಂಕರ್, ಬಳ್ಳಾರಿ-ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕ ರಾಜ ವಂಕಟಪ್ಪ ನಾಯಕ, ರಾಮನಗರ-ಪಿಜಿಆರ್ ಸಿಂಧ್ಯಾ, ಸುರೇಶ್ಬಾಬು, ಬೋಜೆಗೌಡ, ಕೆ.ಗೋಪಾಲಯ್ಯ, ಆರ್.ಪ್ರಕಾಶ್ ಅವರನ್ನು ನೇಮಿಸಲಾಗಿದೆ.
ಮಂಡ್ಯಕ್ಕೆ ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಫುರುಲ್ಲಾ ಖಾನ್, ಕೆ.ವಿ.ನಾರಾಯಣ ಸ್ವಾಮಿ, ಶಿವಮೊಗ್ಗ ಕ್ಷೇತ್ರಕ್ಕೆ ಬಿ.ಎಂ.ಫಾರೂಕ್, ವೈಎಸ್ವಿ ದತ್ತ, ಕಾಂತರಾಜು ಹಾಗೂ ಬಿ.ಬಿ.ನಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಎಚ್.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.