ಉಪಚುನಾವಣೆಗೆ ಜೆಡಿಎಸ್ ಉಸ್ತುವಾರಿಗಳ ನೇಮಕ

Update: 2018-10-22 16:36 GMT

ಬೆಂಗಳೂರು, ಅ. 22: ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶಿವಮೊಗ್ಗಕ್ಕೆ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಬಳ್ಳಾರಿಗೆ ಟಿ.ಎ.ಶರವಣ ಹಾಗೂ ರಾಮನಗರ ಕ್ಷೇತ್ರಕ್ಕೆ ಪಿಜಿಆರ್ ಸಿಂಧ್ಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಜಮಖಂಡಿ: ಮಾಜಿ ಶಾಸಕರಾದ ಕೋನರೆಡ್ಡಿ, ಎಚ್.ಎಸ್.ಶಿವಶಂಕರ್, ಬಳ್ಳಾರಿ-ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕ ರಾಜ ವಂಕಟಪ್ಪ ನಾಯಕ, ರಾಮನಗರ-ಪಿಜಿಆರ್ ಸಿಂಧ್ಯಾ, ಸುರೇಶ್‌ಬಾಬು, ಬೋಜೆಗೌಡ, ಕೆ.ಗೋಪಾಲಯ್ಯ, ಆರ್.ಪ್ರಕಾಶ್ ಅವರನ್ನು ನೇಮಿಸಲಾಗಿದೆ.

ಮಂಡ್ಯಕ್ಕೆ ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಫುರುಲ್ಲಾ ಖಾನ್, ಕೆ.ವಿ.ನಾರಾಯಣ ಸ್ವಾಮಿ, ಶಿವಮೊಗ್ಗ ಕ್ಷೇತ್ರಕ್ಕೆ ಬಿ.ಎಂ.ಫಾರೂಕ್, ವೈಎಸ್‌ವಿ ದತ್ತ, ಕಾಂತರಾಜು ಹಾಗೂ ಬಿ.ಬಿ.ನಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಎಚ್.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News