ಹನೂರು: ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Update: 2018-11-01 12:25 GMT

ಹನೂರು, ನ. 1: ಕ್ಷೇತ್ರ ವ್ಯಾಪ್ತಿಯ  ಬಾಣೂರು ಗೇಟ್ ಬಳಿ ಜಮೀನೂಂದರಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು  ಬಂಧಿಸುವಲ್ಲಿ ಹನೂರು ಪೊಲೀಸರು   ಯಶಸ್ವಿಯಾಗಿದ್ದಾರೆ.

ಚಿಕ್ಕಲೂರು ಸಮೀಪದ ಕೂತ್ತುನೂರು ಗ್ರಾಮ ನಿವಾಸಿಯಾದ ನಟೇಶ್ಬಿನ್ ಗೋವಿಂದರಾಜು ಎಂಭಾತನೇ ಬಂದಿತ ಆರೋಪಿ. ಈತ ಬಾಣೂರು ಗೇಟ್ ಸಮೀಪ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳಿದಿದ್ದರ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ ಸಿಪಿಐ ಮೋಹಿತ್‌ಸಹದೇವ್  ಮತ್ತು ತಂಡ ದಾಳಿ ನಡೆಸಿದಾಗ ಅಂದಾಜು 16ಕೆಜಿ 400ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ  ಮುಂದಿನ ಕ್ರಮಕೈಗೂಂಡಿದ್ದಾರೆ.

 ದಾಳಿಯಲ್ಲಿ ಪೋಲಿಸ್ ಸಿಬ್ಬಂದಿಗಳಾದ ಸಬ್‌ಇನ್ಸ್‌ಪೇಕ್ಟರ್ ನಾಗೇಶ್ ಸಿಬ್ಬಂದಿಗಳಾದ ರಾಜು , ಸಿದ್ದೇಶ್ ರಾಮದಾಸ್ ಚಂದ್ರಶೇಖರ್ , ಪ್ರದೀಪ್ , ವಿಶ್ವನಾಥ್ , ಮಕಂದರ್ ಶಂಕರ್ ಮಲ್ಲಿಕಾರ್ಜುನ್ ಸಿಬ್ಬಂದಿಗಳಾದ ಬಂಡಳ್ಳಿ ವೈದಾಧಿಕಾರಿ ಏಜಾಜುಲ್ಲಾಖಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News