ಕೊಳ್ಳೇಗಾಲ: ಅಕ್ರಮ ಮರಳು ಸಾಗಾಟ; ಇಬ್ಬರ ಬಂಧನ
Update: 2018-11-05 17:33 GMT
ಕೊಳ್ಳೇಗಾಲ, ನ.5: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಹಳೇಹಂಪಾಪುರ ಗ್ರಾಮದ ಜಗದೀಶ್, ಬೋಗರಾಜು ಎಂಬವರು ಬಂಧಿತ ಆರೋಪಿಗಳು.
ಹಳೇಹಂಪಾಪುರ ಗ್ರಾಮದ ಕಾವೇರಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಎತ್ತಿನಗಾಡಿಯಲ್ಲಿ ತುಂಬಿಕೊಂಡು ಬರುವ ವೇಳೆ ಪಟ್ಟಣ ಪೊಲೀಸ್ ಠಾಣೆಯ ಉಪನೀರಿಕ್ಷಕಿ ವೀಣಾನಾಯಕ್ ದಾಳಿ ನಡೆಸಿ ಆರೋಪಿಗಳನ್ನು ಎತ್ತಿನಗಾಡಿ ಸಮೇತ ಬಂಧಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗದ ಮುಂದೆ ಹಾಜರು ಪಡಿಸಲಾಗಿದೆ.