×
Ad

ಬಳ್ಳಾರಿಯಲ್ಲಿ ಕಾಂಗ್ರೆಸ್ ನ ವಿಎಸ್ ಉಗ್ರಪ್ಪ ಗೆಲುವಿನತ್ತ ದಾಪುಗಾಲು

Update: 2018-11-06 08:13 IST

ಬೆಂಗಳೂರು, ನ.6   ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ನಡೆದ ಉಪಚುನಾವಣೆಯ ಮತ  ಎಣಿಕೆ ಇಂದು ಬೆಳಗ್ಗೆ 8:00 ಗಂಟೆಗೆ ಆರಂಭಗೊಂಡಿದೆ.ಮೊದಲು ಅಂಚೆ ಮತಗಳ ಎಣಿಕೆ ನಡೆಯುತ್ತಿದೆ.

ಮಂಡ್ಯ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ, ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ನಡೆಯತ್ತಿದೆ. 

 ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಎಲ್ಲ ಕ್ಷೇತ್ರಗಳಲ್ಲೂ ನೇರ ಹಣಾಹಣಿ ಏರ್ಪಟ್ಟಿದೆ. 

ಅಂಚೆ ಮತ ಎಣಿಕೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ, ಶಿವಮೊಗ್ಗದಲ್ಲಿ  ಬಿಜೆಪಿಯ ಬಿ.ವೈ ರಾಘವೇಂದ್ರ ಮತ್ತು ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಅನಿತಾ ಕುಮಾರ ಸ್ವಾಮಿ, ಜಮಖಂಡಿಯಲ್ಲಿ  ಕಾಂಗ್ರೆಸ್ ನ ಆನಂದ ನ್ಯಾಮಗೌಡ ಮುನ್ನಡೆ ಸಾಧಿಸಿದ್ದಾರೆ.

ಮಂಡ್ಯದಲ್ಲಿ ಮತ ಎಣಿಕೆ ತಾಂತ್ರಿಕ ದೋಷದಿಂದಾಗಿ  ತಡವಾಗಿ ಮತ ಎಣಿಕೆ ಆರಂಭಗೊಂಡಿದೆ.  ಮೊದಲ ಸುತ್ತಿನಲ್ಲಿ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಮುನ್ನಡೆ ಸಾಧಿಸಿದ್ದಾರೆ.

*  ರಾಮನಗರದಲ್ಲಿ   ಜೆಡಿಎಸ್ ನ ಅನಿತಾ ಕುಮಾರ ಸ್ವಾಮಿ 2ನೇ ಸುತ್ತಿನಲ್ಲಿ  10,882  ಮತಗಳ ಮುನ್ನಡೆ

*ಶಿವಮೊಗ್ಗದಲ್ಲಿ   ಬಿಜೆಪಿಯ ಬಿ.ವೈ ರಾಘವೇಂದ್ರ   ಮುನ್ನಡೆ ಸಾಧಿಸಿದ್ದಾರೆ

*ಜಮಖಂಡಿಯಲ್ಲಿ  ಕಾಂಗ್ರೆಸ್ ನ  ಆನಂದ ನ್ಯಾಮೆಗೌಡ ಮುನ್ನಡೆ 

,,,,,,,

*ರಾಮನಗರದಲ್ಲಿ  4ನೇ ಸುತ್ತು : ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರ ಸ್ವಾಮಿ 20,000 ಮತಗಳ  ಮುನ್ನಡೆ

 *ಶಿವಮೊಗ್ಗದಲ್ಲಿ ಜೆಡಿಎಸ್     ಮಧು ಬಂಗಾರಪ್ಪ   ಅಲ್ಲ  ಮುನ್ನಡೆ

* ಮಂಡ್ಯದಲ್ಲಿ  ಜೆಡಿಎಸ್ ನ  ಎಲ್ ಆರ್ ಶಿವರಾಮೇಗೌಡ  26159 ಮತಗಳ ಮುನ್ನಡೆ

*ಬಳ್ಳಾರಿಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ  ವಿಎಸ್ ಉಗ್ರಪ್ಪ  17480 ಮತಗಳ ಮುನ್ನಡೆ

*ಜಮಖಂಡಿಯಲ್ಲಿ ಕಾಂಗ್ರೆಸ್ ನ  ಆನಂದ ನ್ಯಾಮೆ ಗೌಡ    5543 ಮತಗಳ ಮುನ್ನಡೆ 

*ಬಳ್ಳಾರಿಯಲ್ಲಿ  2ನೇ ಸುತ್ತು ಕಾಂಗ್ರೆಸ್ ನ ವಿಎಸ್ ಉಗ್ರಪ್ಪ 31, 138 ಮತಗಳ  ಮುನ್ನಡೆ

,,,,,,,,

ಶಿವಮೊಗ್ಗ  :  ಶಿವಮೊಗ್ಗದಲ್ಲಿ 3ನೇ ಸುತ್ತಿನಲ್ಲಿ ಬಿಜೆಪಿಯ ಬಿ ವೈ ರಾಘವೇಂದ್ರ 3,765 ಮತಗಳ ಮುನ್ನಡೆ
ಬಳ್ಳಾರಿ : ಬಳ್ಳಾರಿಯಲ್ಲಿ  4ನೇ ಸುತ್ತು ಕಾಂಗ್ರೆಸ್ ನ ವಿಎಸ್ ಉಗ್ರಪ್ಪ 31, 138 ಮುನ್ನಡೆ

ಮಂಡ್ಯ :   ಜೆಡಿಎಸ್ ನ ಎಲ್ ಆರ್ ಶಿವರಾಮೆ ಗೌಡ 53,271 ಮುನ್ನಡೆ

ಜಮಖಂಡಿ :  5ನೇ ಸುತ್ತು ಕಾಂಗ್ರೆಸ್ ನ  ಆನಂದ್  ನ್ಯಾಮ ಗೌಡ    9,300 ಮತಗಳ  ಮುನ್ನಡೆ

 ರಾಮನಗರ : 6ನೇ ಸುತ್ತು ಜೆಡಿಎಸ್ ನ ಅನಿತಾ ಕುಮಾರಸ್ವಾಮಿ 27,998 ಮತಗಳ ಮುನ್ನಡೆ ಸಾಧಿಸಿ ಗೆಲುವಿನ ಕಡೆಗೆ ಹೆಜ್ಜೆ ಇರಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News