ಮಂಡ್ಯ: ಚುನಾವಣೆಗೆ ನಿಯೋಜಿತ ಯೋಧರಿಂದ ದೀಪಾವಳಿ ಆಚರಣೆ

Update: 2018-11-08 16:38 GMT

ಮಂಡ್ಯ, ನ.8: ಲೋಕಸಭಾ ಉಪಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆಗಮಿಸಿದ್ದ ಯೋಧರು ತಾವು ವಾಸ್ತವ್ಯ ಮಾಡಿದ್ದ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದರು.

ಸೋಮನಹಳ್ಳಿ ಗ್ರಾಮದ ಐಟಿಐ ಕಾಲೇಜಿನಲ್ಲಿ ವಾಸ್ತವ್ಯ ಮಾಡಿದ್ದ ಇವರು, ಬುಧವಾರ ರಾತ್ರಿ ಕಾಲೇಜಿನಲ್ಲೇ ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಸಂಭ್ರಮ ಸಡಗರದಿಂದ ದೀಪಾವಳಿ ಆಚರಣೆ ಮಾಡಿದರು.

ಸದಾ ಗಡಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ನಿರತರಾಗುವ ನಾವು ನಮ್ಮ ಕುಟುಂಬದವರ ಜೊತೆ ಸೇರಿ ಹಬ್ಬವನ್ನು ಆಚರಿಸುವುದು ಅಪರೂಪ. ಆದ್ದರಿಂದ ಇಲ್ಲಿರುವ ಪ್ರತಿಯೊಂದು ತಂಡದಲ್ಲಿರುವ ಯೋಧರೆಲ್ಲ ನಮ್ಮ ಅಣ್ಣತಮ್ಮ ಬಂಧುಬಳಗದಂತೆ ದೀಪಾವಳಿ ಆಚರಣೆಯನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News