ಮೈಸೂರು: ತಾಯಿಯ ಎದುರೇ ಮಗಳನ್ನು ಅಪಹರಿಸಿದ ದುಷ್ಕರ್ಮಿಗಳು

Update: 2018-11-12 16:47 GMT
ಸಾಂದರ್ಭಿಕ ಚಿತ್ರ

ಮೈಸೂರು,ನ.12: ಮನೆಯ ಕಂಪೌಂಡ್ ಒಳಗೆ ಕುಳಿತಿದ್ದ 17 ವರ್ಷದ ಬಾಲಕಿಯನ್ನು ಆಕೆಯ ತಾಯಿಯ ಮುಂದೆಯೇ ಕಿಡ್ನಾಪ್ ಮಾಡಿರುವ ಬೆಚ್ಚಿಬೀಳಿಸುವ ಘಟನೆಯೊಂದು ನಗರದಲ್ಲಿ ನಡೆದಿದೆ.

ಗೋಕುಲಂನ ಎರಡನೇ ಹಂತದಲ್ಲಿ ಈ ಘಟನೆ ನಡೆದಿದೆ. ಮನೆಯ ಕಾಂಪೌಂಡ್ ಒಳಗೆ ಕುಳಿತಿದ್ದಾಗ ಹೊಂಗಳ್ಳಿ ಗ್ರಾಮದ ಶ್ರೀಧರ ಹಾಗೂ ಆತನೊಂದಿಗೆ ನಾಲ್ಕು ಜನ ಪಲ್ಸರ್ ಬೈಕ್ ನಲ್ಲಿ ಬಂದು ಮಗಳಿಗೆ ಬೆದರಿಕೆ ಹಾಕಿ ಎಳೆದುಕೊಂಡು ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.

ಮಗಳನ್ನು ಅಪಹರಣ ಮಾಡಿರುವ ಶ್ರೀಧರ ಹಾಗೂ ಇತರರ ವಿರುದ್ಧ ಮಹಿಳೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಆರೋಪಿಗಳ ಬಂಧನದ ನಂತರ ಸತ್ಯಾಂಶ ಹೊರಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News