ಪ್ರವಾದಿ ನಿಂದನೆ: ಸಂತೋಷ್ ತಮ್ಮಯ್ಯಗೆ ಜಾಮೀನು

Update: 2018-11-13 13:55 GMT

ಮಡಿಕೇರಿ, ನ.13: ಪ್ರವಾದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದಡಿ ಬಂಧಿಸಲಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ಪೊನ್ನಂಪೇಟೆ ಜೆಎಂಎಫ್‍ಸಿ ಹಾಗೂ ಸಿವಿಲ್ ನ್ಯಾಯಾಲಯ ಜಾಮೀನು ನೀಡಿದೆ.

ನ್ಯಾಯಾಧೀಶರಾದ ಮೋಹನ್‍ ಗೌಡ ಅವರು ಅರ್ಧ ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿ ಎರಡು ಬಾರಿ ತೀರ್ಪು ಕಾಯ್ದಿರಿಸಿದರು. ಬಳಿಕ ಸಂಜೆ 6.30ಕ್ಕೆ ನಡೆದ ವಿಚಾರಣೆಯಲ್ಲಿ ಜಾಮೀನು ನೀಡಿ ಆದೇಶಿಸಿದರು.

ಇಬ್ಬರ ವೈಯಕ್ತಿಕ ಜಾಮೀನು ಪಡೆದ ನ್ಯಾಯಾಧೀಶರು, ಇನ್ನು ಮುಂದೆ ಪ್ರಚೋದನಕಾರಿ ಭಾಷಣ ಮಾಡದಂತೆ ಆದೇಶಿಸುವ ಮೂಲಕ ಸಂತೋಷ್ ತಮ್ಮಯ್ಯ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.

ಸಂತೋಷ್ ಪರ ಮಡಿಕೇರಿಯ ವಕೀಲ ಜಿ. ಕೃಷ್ಣಮೂರ್ತಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News