ಪಿಯು ಉಪನ್ಯಾಸಕರ ನೇಮಕಾತಿ: ಪರೀಕ್ಷಾ ದಿನಾಂಕ ಬದಲಾವಣೆ

Update: 2018-11-14 16:40 GMT

ಬೆಂಗಳೂರು, ನ.14: ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಸಂಬಂಧ, ರಸಾಯನ ಶಾಸ್ತ್ರ ವಿಷಯದ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

ಡಿಸೆಂಬರ್ 3ರ ಬದಲಾಗಿ ರಸಾಯನ ಶಾಸ್ತ್ರ ವಿಷಯದ ಪತ್ರಿಕೆ-1 ಮತ್ತು ಪತ್ರಿಕೆ-2 ಅನ್ನು ಡಿ. 4ರಂದು ನಡೆಸಲಾಗುವುದು. ಸದರಿ ಬದಲಾವಣೆಯನ್ನು ಇಂಗ್ಲಿಷ್ ಮತ್ತು ರಸಾಯನ ಶಾಸ್ತ್ರ ಎರಡೂ ವಿಷಯಗಳಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಿ ಮಾರ್ಪಡಿಸಲಾಗಿದೆ.

ರಸಾಯನ ಶಾಸ್ತ್ರ ವಿಷಯಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾರ್ಪಡಿಸಿದ ದಿನಾಂಕ ಅಂದರೆ ಡಿಸೆಂಬರ್ 4ರಂದು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ. ಮಾರ್ಪಡಿಸಿದ ವೇಳಾಪಟ್ಟಿಯ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ನೋಡಬಹುದಾಗಿದೆ. ಇತರೆ ವಿಷಯಗಳ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News