ಶಿವಮೊಗ್ಗ: ಅಕ್ರಮ ಮರಳು ಸಾಗಾಟ; ಟ್ರ್ಯಾಕ್ಟರ್ ಸಮೇತ ಓರ್ವನ ಸೆರೆ
Update: 2018-11-14 17:10 GMT
ಶಿವಮೊಗ್ಗ, ನ.14: ಯಾವುದೇ ಪರವಾನಿಗೆಯಿಲ್ಲದೆ ಕಾನೂನು ಬಾಹಿರವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಟ್ರ್ಯಾಕ್ಟರ್ ಸಮೇತ ಓರ್ವನನ್ನು ಬಂಧಿಸಿದ ಘಟನೆ ಶಿವಮೊಗ್ಗ ನಗರದ ಹೊರವಲಯ ಪಿಳ್ಳಂಗೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಲೋಕೇಶ್ (34) ಬಂಧಿತ ಆರೋಪಿ. ಈತ ಪಿಳ್ಳಂಗೆರೆ ಗ್ರಾಮದ ಸಮೀಪ ಹಾದು ಹೋಗಿರುವ ತುಂಗಾ ನದಿಯಲ್ಲಿ ಮರಳು ತೆಗೆದು, ಟ್ರ್ಯಾಕ್ಟರ್ ಗೆ ತುಂಬುತ್ತಿದ್ದ. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಯು ಸರ್ಕಾರದಿಂದ ಯಾವುದೇ ಅನುಮತಿಯಿಲ್ಲದೆ ಮರಳು ಸಾಗಾಣೆಗೆ ಯತ್ನಿಸಿದ್ದು ಪತ್ತೆಯಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.