ಕಾವೇರಿಯಲ್ಲಿ ಅನಂತ್ ಕುಮಾರ್ ಅಸ್ಥಿ ವಿಸರ್ಜನೆ

Update: 2018-11-14 18:02 GMT

ಶ್ರೀರಂಗಪಟ್ಟಣ, ನ.14: ಕೇಂದ್ರ ಸಚಿವ ಅನಂತ್‍ ಕುಮಾರ್ ಅವರ ಚಿತಾಭಸ್ಮವನ್ನು ಇಲ್ಲಿನ ಕಾವೇರಿ ನದಿಯ ಪಶ್ಚಿಮವಾಹಿನಿಯಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು.

ಪುರೋಹಿತ ಭಾನುಪ್ರಕಾಶ್ ಶರ್ಮಾ ಸಮ್ಮುಖದಲ್ಲಿ ನಡೆದ ಕಾರ್ಯದಲ್ಲಿ ಅನಂತ್‍ ಕುಮಾರ್ ಸಹೋದರ ನಂದಕುಮಾರ್ ಕಾವೇರಿಯಲ್ಲಿ ಅಸ್ಥಿಯನ್ನು ಲೀನ ಮಾಡಿದರು.

ಇದಕ್ಕೂ ಮೊದಲು ವೈದಿಕ ಬ್ರಾಹ್ಮಣ ಸಂಪ್ರದಾಯಂತೆ ಕಾವೇರಿ ನದಿ ತಟದಲ್ಲಿ ಪೂಜೆ ಸಲ್ಲಿಸಲಾಯಿತು. ಸ್ತೋತ್ರಗಳ ಪಟಣದ ಮೂಲಕ ಅಸ್ಥಿಗೆ ಪೂಜೆ ಸಲ್ಲಿಸಿ ಶಾಂತಿ ಮಾಡಲಾಯಿತು. ನಂತರ ನಂದಕುಮಾರ್ ಕಾವೇರಿಯಲ್ಲಿ ಅಸ್ಥಿಯನ್ನು ಬಿಟ್ಟು, ಕಾವೇರಿ ಸ್ನಾನ ಮಾಡಿ, ಹಾಲಿನಲ್ಲಿ ಕರವನ್ನು ತೊಳೆಯೋ ಮೂಲಕ ಅಂತಿಮ ವಿಧಿ ವಿಧಾನ ಪೂರೈಸಿದರು. 

ಸಂಸದರಾದ ಪ್ರಹ್ಲಾದ್ ಜೋಷಿ, ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ರಾಮ್‍ದಾಸ್ ಹಾಗೂ ಮಂಡ್ಯ ಜಿಲ್ಲೆಯ ಬಿಜೆಪಿ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News