ಮುಂಡಗೋಡ: ಸಿಡಿಲು ಬಡಿದು ಮಹಿಳೆ ಸಾವು

Update: 2018-11-18 16:14 GMT

ಮುಂಡಗೋಡ,ನ.18: ಸಿಡಿಲು ಬಡಿದು ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮವ್ವ ಹೇಮನಪ್ಪ ಲಮಾಣಿ(52) ಎಂದು ಗುರುತಿಸಲಾಗಿದೆ.

ರವಿವಾರ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗುಡುಗು ಮಿಶ್ರಿತ ಮಳೆ ಸುರಿಯಲಾರಂಭಿಸಿದ್ದು, ಏಕಾಏಕಿ ಸಿಡಿಲು ಬಡಿದು ಈ ದುರ್ಘಟನೆ ನಡೆದಿದೆ. ಇವರ ಜೊತೆಯಲ್ಲಿದ್ದ ಗೌರವ್ವ ತಿಪ್ಪಣ್ಣ ಲಮಾಣಿ ಹಾಗೂ ಲಕ್ಷ್ಮಿ ತಿಪ್ಪಣ್ಣ ಲಮಾಣಿ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಇಲ್ಲಿನ ಸರಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News