ಹೋರಾಟಗಾರ ವರವರ ರಾವ್ ಆಸ್ಪತ್ರೆಗೆ ದಾಖಲು

Update: 2018-11-19 15:11 GMT

ಹೊಸದಿಲ್ಲಿ, ನ.19: ಎಲ್ಗರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಪೊಲೀಸ್ ಕಸ್ಟಡಿ ವಿಧಿಸಲಾಗಿದ್ದ ಹೋರಾಟಗಾರ , ಸಾಹಿತಿ ವರವರ ರಾವ್‌ರನ್ನು ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಪುಣೆಯ ಸಸ್ಸಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರವರ ರಾವ್‌ಗೆ ಹೈದರಾಬಾದ್ ಹೈಕೋರ್ಟ್‌ನ ಸೂಚನೆ ಮೇರೆಗೆ ವಿಧಿಸಲಾಗಿದ್ದ ಗೃಹಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರಿಗೆ ನವೆಂಬರ್ 26ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ವರವರ ರಾವ್ ನಿಷೇಧಿತ ಮಾವೋವಾದಿ ಸಿಪಿಐ ಸಂಘಟನೆಯ ಹಿರಿಯ ಮತ್ತು ಸಕ್ರಿಯ ಸದಸ್ಯನಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ನೇಪಾಳ ಹಾಗೂ ಮಣಿಪುರದಲ್ಲಿ ತನಗಿರುವ ಸಂಪರ್ಕವನ್ನು ಬಳಸಿಕೊಂಡು ಶಸ್ತ್ರಾಸ್ತ್ರ ಸಂಗ್ರಹಣೆಯಲ್ಲಿ ಮತ್ತು ಸುಜೀರ್‌ಗಡದಲ್ಲಿ ನಡೆದ ನಕ್ಸಲ್ ದಾಳಿ ಪ್ರಕರಣದಲ್ಲಿ ರಾವ್ ಸಂಬಂಧ ಹೊಂದಿದ್ದಾರೆ ಎಂಬುದು ಪೊಲೀಸರ ಹೇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News