ಕೆ.ಆರ್.ಪೇಟೆ: ನೇಣು ಬಿಗಿದು ವರ್ತಕ ಆತ್ಮಹತ್ಯೆ

Update: 2018-11-20 17:26 GMT

ಕೆ.ಆರ್.ಪೇಟೆ, ನ.20: ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ವರ್ತಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ  ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ವಿಜಯಾ ಬ್ಯಾಂಕ್ ಕಟ್ಟಡದಲ್ಲಿ ಕೊಬ್ಬರಿ ಮಂಡಿ ನಡೆಸುತ್ತಿದ್ದ ತೆಂಡೇಕೆರೆ ಗ್ರಾಮದ ರವಿ(35)  ಆತ್ಮಹತ್ಯೆ ಮಾಡಿಕೊಂಡವರು.
ರವಿ ವ್ಯಾಪಾರದಲ್ಲಿ ಅಪಾರ ನಷ್ಟ ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ಕೊಬ್ಬರಿ ಅಂಗಡಿಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News