ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಭಾರಿಗಳ ನೇಮಕ

Update: 2018-11-21 16:48 GMT

ಬೆಂಗಳೂರು, ನ.21: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿರುವ ವಿರೋಧ ಪಕ್ಷ ಬಿಜೆಪಿ, ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಎಲ್ಲ 28 ಕ್ಷೇತ್ರಗಳಿಗೂ ಪ್ರಭಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಹಿನ್ನೆಲೆಯಲ್ಲಿ 28 ಲೋಕಸಭಾ ಕ್ಷೇತ್ರಗಳಿಗೂ ಪ್ರಭಾರಿಗಳು ಹಾಗೂ ಸಂಚಾಲಕರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಮೈಸೂರು-ಕೊಡಗು: ಕೆ.ಎಸ್.ಈಶ್ವರಪ್ಪ(ಪ್ರಭಾರಿ), ಎನ್.ವಿ.ಫನೀಶ್ (ಸಂಚಾಲಕ), ಚಾಮರಾಜನಗರ: ಎಲ್.ನಾಗೇಂದ್ರ(ಪ್ರಭಾರಿ), ಬಾಲಸುಬ್ರಹ್ಮಣ್ಯ (ಸಂಚಾಲಕ), ಮಂಡ್ಯ: ಇ.ಅಶ್ವಥ್‌ ನಾರಾಯಣ್(ಪ್ರಭಾರಿ), ಮಧುಚಂದನ್ (ಸಂಚಾಲಕ).

ಹಾಸನ: ಸಿ.ಟಿ.ರವಿ(ಪ್ರಭಾರಿ), ರೇಣುಕುಮಾರ್(ಸಂಚಾಲಕ), ದಕ್ಷಿಣ ಕನ್ನಡ: ಸುನೀಲ್‌ ಕುಮಾರ್(ಪ್ರಭಾರಿ), ಗೋಪಾಲಕೃಷ್ಣ ಹೇರಳೆ(ಸಂಚಾಲಕ), ಉಡುಪಿ-ಚಿಕ್ಕಮಗಳೂರು: ಅರಗ ಜ್ಞಾನೇಂದ್ರ(ಪ್ರಭಾರಿ), ಕೋಟಾ ಶ್ರೀನಿವಾಸ ಪೂಜಾರಿ(ಸಂಚಾಲಕ), ಶಿವಮೊಗ್ಗ: ವಿಶ್ವೇಶ್ವರ ಹೆಗಡೆ ಕಾಗೇರಿ(ಪ್ರಭಾರಿ), ಹರತಾಳ ಹಾಲಪ್ಪ(ಸಂಚಾಲಕ).

ಉತ್ತರ ಕನ್ನಡ: ಲಿಂಗರಾಜ್ ಪಾಟೀಲ್(ಪ್ರಭಾರಿ), ವಿನೋದ್ ಪ್ರಭು(ಸಂಚಾಲಕ), ಹಾವೇರಿ: ಬಸವರಾಜ ಬೊಮ್ಮಾಯಿ(ಪ್ರಭಾರಿ), ಸಿದ್ದರಾಜ್ ಕಲಕೋಟೆ(ಸಂಚಾಲಕ), ಧಾರವಾಡ: ಗೋವಿಂದ ಕಾರಜೋಳ(ಪ್ರಭಾರಿ), ಡಾ.ಮಾ.ನಾಗರಾಜ್(ಸಂಚಾಲಕ).

ಬೆಳಗಾವಿ: ಮಹಾಂತೇಶ್ ಕವಟಗಿಮಠ(ಪ್ರಭಾರಿ), ಈರಣ್ಣ ಕಡಾಡಿ (ಸಂಚಾಲಕ), ಚಿಕ್ಕೋಡಿ: ಸಂಜಯ್‌ಪಾಟೀಲ್(ಪ್ರಭಾರಿ), ಶಶಿಕಾಂತ ನಾಯಕ್(ಸಂಚಾಲಕ), ಬಾಗಲಕೋಟೆ: ಸಿ.ಸಿ.ಪಾಟೀಲ್(ಪ್ರಭಾರಿ), ವೀರಣ್ಣ ಚರಂತಿಮಠ(ಸಂಚಾಲಕ), ವಿಜಯಪುರ: ಲಕ್ಷ್ಮಣ ಸವದಿ(ಪ್ರಭಾರಿ), ಅರುಣ್ ಶಹಾಪುರ(ಸಂಚಾಲಕ).

ಬೀದರ್: ಅಮರನಾಥ ಪಾಟೀಲ್(ಪ್ರಭಾರಿ), ಸುಭಾಷ್ ಕಲ್ಲೂರ(ಸಂಚಾಲಕ), ಕಲಬುರಗಿ: ಎನ್.ರವಿಕುಮಾರ್(ಪ್ರಭಾರಿ), ಮಾಲೀಕಯ್ಯ ಗುತ್ತೇದಾರ್ (ಸಂಚಾಲಕ), ರಾಯಚೂರು: ಹಾಲಪ್ಪ ಆಚಾರ್(ಪ್ರಭಾರಿ), ರಮಾನಂದ ಯಾದವ್(ಸಂಚಾಲಕ), ಕೊಪ್ಪಳ: ಬಿ.ಶ್ರೀರಾಮುಲು(ಪ್ರಭಾರಿ), ಅಪ್ಪಣ್ಣ ಪದಕಿ(ಸಂಚಾಲಕ), ಬಳ್ಳಾರಿ: ಜಗದೀಶ್ ಶೆಟ್ಟರ್(ಪ್ರಭಾರಿ), ಮೃತ್ಯುಂಜಯ ಜಿನಗಾ(ಸಂಚಾಲಕ).

ದಾವಣಗೆರೆ: ಆಯನೂರು ಮಂಜುನಾಥ(ಪ್ರಭಾರಿ), ಜೀವನಮೂರ್ತಿ (ಸಂಚಾಲಕ), ಚಿತ್ರದುರ್ಗ: ವೈ.ಎ.ನಾರಾಯಣಸ್ವಾಮಿ(ಪ್ರಭಾರಿ), ಟಿ.ಜಿ.ನರೇಂದ್ರ ನಾಥ್(ಸಂಚಾಲಕ), ತುಮಕೂರು: ಅರವಿಂದ ಲಿಂಬಾವಳಿ(ಪ್ರಭಾರಿ), ಬೆಟ್ಟಸ್ವಾಮಿ(ಸಂಚಾಲಕ), ಬೆಂಗಳೂರು ಗ್ರಾಮಾಂತರ: ಅಶ್ವಥ್‌ ನಾರಾಯಣ (ಪ್ರಭಾರಿ), ತುಳಸಿ ಮುಜಿರಾಜಗೌಡ(ಸಂಚಾಲಕ).

ಚಿಕ್ಕಬಳ್ಳಾಪುರ: ವಿ.ಸೋಮಣ್ಣ(ಪ್ರಭಾರಿ), ಎಸ್.ಆರ್.ವಿಶ್ವನಾಥ್(ಸಂಚಾಲಕ), ಕೋಲಾರ: ಕಟ್ಟಾ ಸುಬ್ರಹ್ಮಣ್ಯನಾಯ್ಡು(ಪ್ರಭಾರಿ), ವೈ.ಸಂಪಂಗಿ(ಸಂಚಾಲಕ), ಬೆಂಗಳೂರು ದಕ್ಷಿಣ: ಸುಬ್ಬನರಸಿಂಹ(ಪ್ರಭಾರಿ), ಆರ್.ಅಶೋಕ್(ಸಂಚಾಲಕ), ಬೆಂಗಳೂರು ಕೇಂದ್ರ: ಡಾ.ಅಶ್ವಥ ನಾರಾಯಣ(ಪ್ರಭಾರಿ), ಸಚ್ಚಿದಾನಂದಮೂರ್ತಿ (ಸಂಚಾಲಕ), ಬೆಂಗಳೂರು ಉತ್ತರ: ಬಿ.ಎಚ್.ಕೃಷ್ಣಾರೆಡ್ಡಿ(ಪ್ರಭಾರಿ), ಎಸ್.ಮುನಿರಾಜು(ಸಂಚಾಲಕ) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News