ಕೆ.ಆರ್.ಪೇಟೆ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
Update: 2018-11-22 12:50 GMT
ಕೆ.ಆರ್.ಪೇಟೆ, ನ.22: ಪಟ್ಟಣದ ಹೇಮಾವತಿ ಬಡಾವಣೆಯ ಬಸ್ ಡಿಪೋ ಹಿಂಭಾಗದ ಹೊಂಗೆ ಮರದಲ್ಲಿ ಯುವಕನ ಮೃತ ದೇಹ ನೇಣುಬಿಗಿದ ರೀತಿಯಲ್ಲಿ ಪತ್ತೆಯಾಗಿದೆ.
ಪಟ್ಟಣದ ವರ್ತಕ ಕೆ.ಆರ್.ಚಂದ್ರಶೇಖರ್ ಅವರ ಪುತ್ರ ಕೆ.ಸಿ.ವಿಶ್ವನಾಥ(33) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಈತ ಸಂತೇಬಾಚಹಳ್ಳಿ ಬಳಿ ರಂಗನಾಥಪುರ ಕ್ರಾಸ್ನಲ್ಲಿರುವ ಅದಾನಿ ಸೋಲಾರ್ ಪ್ಲಾಂಟ್ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ.
ಮೂರು ತಿಂಗಳ ಹಿಂದೆ ಬೈಕ್ ಅಪಘಾತವಾಗಿ ಕಾಲು ಮುರಿದು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದ ವಿಶ್ವನಾಥ ಬುಧವಾರ ಬೆಳಗ್ಗೆಯಿಂದ ಕಾಣೆಯಾಗಿದ್ದ. ಈತನ ದೇಹ ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ಇನ್ಸ್ಪೆಕ್ಟರ್ ಎಚ್.ಎಸ್.ವೆಂಕಟೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ದೇಹದ ಶವ ಪರೀಕ್ಷೆ ನಡೆಸಲಾಯಿತು.