ರೈಲ್ವೆ ಇಲಾಖೆಗೆ ಜಾಫರ್ ಶರೀಫ್ ಕೊಡುಗೆ ಅಪಾರ: ಸಿಎಂ ಕುಮಾರಸ್ವಾಮಿ

Update: 2018-11-25 08:29 GMT

ಬೆಂಗಳೂರು, ನ.25:ರೈಲ್ವೆ ಇಲಾಖೆಗೆ  ಮಾಜಿ ಸಚಿವ ದಿವಂಗತ ಜಾಫರ್ ಶರೀಫ್ ಕೊಡುಗೆ ಅಪಾರ. ಅವರೊಬ್ಬ ಧೀಮಂತ ನಾಯಕ ಎಂದು ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದ ಜಾಫರ್ ಶರೀಫ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು “ ಜಾಫರ್ ಶರೀಫ್ ಬಡವರಿಗಾಗಿ ಶ್ರಮಿಸಿದ ಧೀಮಂತ ನಾಯಕ. ಅವರು ಎಲ್ಲ ಸಮುದಾಯದವರನ್ನು ಗೌರವಿಸುತ್ತಿದ್ದರು.   ನನ್ನ ತಂದೆಯ ಸಮಕಾಲಿನ ನಾಯಕರಾಗಿದ್ದರು ಎಂದು ಹೇಳಿದ್ದಾರೆ.

ಜಾಫರ್ ಶರೀಫ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು “ರೈಲ್ವೇ ಸಚಿವರಾಗಿ ಜಾಫರ್ ಶರೀಫ್ ರಾಜ್ಯಕ್ಕೆ ಅನನ್ಯ  ಕೊಡುಗೆ ನೀಡಿದ್ದಾರೆ. ಅವರು ಸ್ವಪ್ರಯತ್ನದಿಂದಲೇ ಅವರು ರಾಷ್ಟ್ರಮಟ್ಟಕ್ಕೆ ಬೆಳೆದವರು’’ ಎಂದು ಅಭಿಪ್ರಾಯಪಟ್ಟರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News