ನಟ ಅಂಬರೀಶ್ ವರ್ಣ ರಂಜಿತ ರಾಜಕಾರಣಿ, ಸ್ನೇಹಜೀವಿ: ಸಿದ್ದರಾಮಯ್ಯ

Update: 2018-11-25 18:04 GMT

ಮೈಸೂರು,ನ.25: ನಟ ಅಂಬರೀಶ್ ವರ್ಣ ರಂಜಿತ ರಾಜಕಾರಣಿ, ಸ್ನೇಹಜೀವಿ, ಅವರ ಸಾವು ನನಗೆ ವೈಯಕ್ತಿಕವಾಗಿ ದುಖಃವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ತಮ್ಮ ಆಪ್ತ ಗೆಳೆಯ ಸಾವಿನ ಬಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಬಿ ಸಾವು ನನಗೆ ವೈಯಕ್ತಿಕವಾಗಿ ತುಂಬಾನೇ ನೋವು ನೀಡಿದೆ. ನಾನು ಅವರು ಸ್ನೇಹಿತರು. ನನಗೆ ಅವರಿಗೆ 40 ವರ್ಷದ ಸ್ನೇಹ. ಅಸಂಖ್ಯಾತ ಸ್ನೇಹಿತರು ಅಂಬರೀಶ್ ಅವರಿಗೆ ಇದ್ದರು. ಎಲ್ಲಾ ಕ್ಷೇತ್ರದಲ್ಲೂ ಅಂಬರೀಶ್ ಗೆ ಸ್ನೇಹಿತರಿದ್ದರು. ಕನ್ನಡ ಚಿತ್ರರಂಗ ಇಷ್ಟೊಂದು ಸಮೃದ್ಧವಾಗಿದ್ದರೆ ಅದಕ್ಕೆ ಅಂಬರೀಶ್ ಕೂಡ ಕಾರಣ. ರಾಜಕುಮಾರ್, ವಿಷ್ಣುವರ್ಧನ್ ಅವರ ಸಾಲಿನಲ್ಲಿ ಅಂಬರೀಶ್ ನಿಲ್ಲುತ್ತಾರೆ ಎಂದು ಬಣ್ಣಿಸಿದರು.

ಅಂಬರೀಶ್ ನನಗೆ 73 ರಲ್ಲಿಯೇ ಪರಿಚಯ ಆಗಿದ್ದರು. ಒಂದು ಹೋಟೆಲ್‍ನಲ್ಲಿ ಪರಿಚಯ ಆಗಿದ್ದರು. ಅವರ ಭಾಷೆ ಒರಟು ಇದ್ದರೂ ಹೃದಯ ಮಾತ್ರ ಮೃದುವಾಗಿತ್ತು. ನನ್ನ ಜೊತೆ ಬಹಳ ಖುಷಿಯಾಗಿರುತ್ತಿದ್ದರು. ಅವರು ಸಚಿವನಾಗಿ ಉತ್ತಮವಾದ ಕೆಲಸ ಮಾಡಿದ್ದು. ಅಂಬಿಯ ಹಲವು ಚಿತ್ರಗಳನ್ನು ನೋಡಿದ್ದೇನೆ. ಆದರೆ ನಾಗರಹಾವು ಇವತ್ತಿಗೂ ನೆನಪಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News