ರಾಜಕೀಯ ಗುರು ಅಂಬರೀಷ್ ಅಂತಿಮ ದರ್ಶನಕ್ಕೂ ಬಾರದ ರಮ್ಯಾ

Update: 2018-11-26 15:34 GMT

ಮಂಡ್ಯ, ನ.26: ನಗರದಲ್ಲಿ ನಡೆದ ನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರ ಅಂತಿಮ ನಮನ ಕಾರ್ಯಕ್ರಮಕ್ಕೆ ಗೈರಾದ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಚಲನಚಿತ್ರ ರಂಗದ ಕಲಾವಿದರು ಸೇರಿದಂತೆ ನಾಡಿನ ಹಲವು ಗಣ್ಯರು ಆಗಮಿಸಿ ಅಗಲಿದ ನಟನಿಗೆ ಅಂತಿಮ ಗೌರವ ಸಲ್ಲಿಸಿದ್ದು, ರಮ್ಯಾ ಅವರು ಬಾರದಿದ್ದ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ರಮ್ಯಾ ಅವರ ರಾಜಕೀಯ ಪ್ರವೇಶಕ್ಕೆ ಅಂಬರೀಷ್ ಗುರುವಾಗಿದ್ದರು. ಅಲ್ಲದೆ, ಆಕೆ ಚಲನಚಿತ್ರ ಕಲಾವಿದೆ ಕೂಡ. ಚಿತ್ರರಂಗದ ದಿಗ್ಗಜ ಕಣ್ಮರೆಯಾದಾಗ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಬೇಕಾಗಿತ್ತು ಎಂಬುವುದಾಗಿ ಅಭಿಮಾನಿಗಳು ಕಿಡಿಕಾರಿದರು. 

ಸಂಸತ್ ಸದಸ್ಯರಾಗಿ ತನ್ನ ಗೆಲುವಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ್ದ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಂತಿಮ ಸಂಸ್ಕಾರ ಮತ್ತು ಕಳೆದ ವಿಧಾನಸಭಾ ಮತ್ತು ಲೋಕಸಭಾ ಉಪಚುನಾವಣೆ ಮತದಾನಕ್ಕೂ ರಮ್ಯಾ ಹಾಜರಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News