ಸಾಲಬಾಧೆ : ರೈತ ಆತ್ಮಹತ್ಯೆ

Update: 2018-12-03 12:49 GMT

ದಾವಣಗೆರೆ,ಡಿ.3: ಸಾಲಬಾಧೆಯಿಂದ ಬೇಸತ್ತು ನೇಣು ಹಾಕಿಕೊಂಡು ರೈತ ಆತ್ಮಹತ್ಯೆಗೈದ ಘಟನೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ನಡೆದಿದೆ.

ಹೆಚ್.ಜಿ. ಸೋಮಶೇಖರ್ (42) ಸಾವನ್ನಪ್ಪಿದ ರೈತ. ಸಾಲಗಾರರ ಹಾಗೂ ಬ್ಯಾಂಕ್ ನವರ ವರ್ತನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈತ ತನ್ನ  6 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಆದರೆ ಭತ್ತ ಹುಳುಬಾಧೆಯಿಂದ ನಾಶವಾಗಿದ್ದು, ಬೆಳೆದಿದ್ದ ಬೆಳೆಯೆಲ್ಲಾ ಹಾನಿಯಾಗಿದೆ. ಅದಲ್ಲದೆ ವಿವಿಧೆಡೆ 20 ಲಕ್ಷ ರು. ಸಾಲ ಮಾಡಿದ್ದರು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News