ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಚಿಕಿತ್ಸಾ ವೆಚ್ಚ ಭರಿಸಲು ಸರಕಾರ ನಿರ್ಧಾರ

Update: 2018-12-03 13:10 GMT

ಬೆಂಗಳೂರು, ಡಿ.3: ಸಾವಿರಾರು ಹೆರಿಗಳನ್ನು ಮಾಡಿಸಿರುವ ಹಾಗೂ ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ ಅವರ ಜೀವಿತಾವಧಿ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಸರಕಾರ ಮುಂದಾಗಿದೆ.

ನರಸಮ್ಮ ಅವರು ಸಮಾಜಕ್ಕೆ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಹಾಗೂ ಕಳಕಳಿಯನ್ನು ಗುರುತಿಸಿರುವ ಸರಕಾರ ಅವರ ಜೀವಿತಾವಧಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಾವತಿಸಲು ತೀರ್ಮಾನಿಸಿ ಇತ್ತೀಚಿಗೆ ಆದೇಶ ಹೊರಡಿಸಿದೆ.

ಪ್ರಸ್ತುತ ನರಸಮ್ಮನವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಧುನಿಕ ಚಿಕಿತ್ಸಾ ಪದ್ಧತಿಯ ಹೊರತಾಗಿಯೂ ಸಾವಿರಾರು ಸಹಜ ಹೆರಿಗೆಗಳನ್ನು ಮಾಡಿಸಿದ ಕೀರ್ತಿ ನರಸಮ್ಮನವರಿಗೆ ಸಲ್ಲುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News