ಜೀವನದಲ್ಲಿ ಜಿಗುಪ್ಸೆ: ಮಹಿಳೆ ಆತ್ಮಹತ್ಯೆ

Update: 2018-12-04 15:29 GMT

ಮೈಸೂರು,ಡಿ.4: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೋರ್ವರು ನೇಣಿಗೆ ಶರಣಾದ ಘಟನೆ ಮಂಚೇಗೌಡನ ಕೊಪ್ಪಲಿನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮಂಚೇಗೌಡನ ಕೊಪ್ಪಲು ನಿವಾಸಿ ನಿಶಾಂತ್ ಅವರ ಪತ್ನಿ ಮಹಾಲಕ್ಷ್ಮಿ (32)ಎಂದು ಗುರುತಿಸಲಾಗಿದ್ದು, 13 ವರ್ಷಗಳ ಹಿಂದೆ ಮದುವೆಯಾದ ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಹಳೆ ಮನೆಯನ್ನು ನೆಲಸಮಗೊಳಿಸಿದ ದಂಪತಿ ಇತ್ತೀಚೆಗಷ್ಟೇ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದರು. ಕಳೆದ ಮಧ್ಯರಾತ್ರಿ ಹೊಸಮನೆಯ ಕೊಠಡಿಯೊಂದರಲ್ಲಿ ಮಹಾಲಕ್ಷ್ಮಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ಬಾಳು ಠಾಣೆಯ ಇನ್ಸ್ ಪೆಕ್ಟರ್ ಗುರುಪ್ರಸಾದ್, ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News