ರಸ್ತೆ ಅಪಘಾತ: ಗೂಡ್ಸ್ ವಾಹನ ಚಾಲಕ ಮೃತ್ಯು

Update: 2018-12-05 17:19 GMT

ಮಂಡ್ಯ, ಡಿ.5: ಲಾರಿ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಢಿಕ್ಕಿಯಾಗಿ ಗೂಡ್ಸ್ ವಾಹನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ದುಂಡನಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.

ಮಂಡ್ಯ ತಾಲೂಕಿನ ಹೊಸಬೂದನೂರು ಗ್ರಾಮದ ಕೃಷ್ಣ ಎಂಬವರ ಪುತ್ರ ಕಿಶೋರ್(23) ಸಾವನ್ನಪ್ಪಿದ ಗೂಡ್ಸ್ ಚಾಲಕ. ಹುಲಿಯೂರು ದುರ್ಗದಲ್ಲಿ ಎಳನೀರು ಮಾರಾಟ ಮಾಡಿ ಸ್ವಗ್ರಾಮಕ್ಕೆ ಹಿಂತಿರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆಯಿಂದ ಎಳನೀರು ತುಂಬಿಕೊಂಡು ಲಾರಿ ತುಮಕೂರು ರಸ್ತೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿತ್ತು. ಗೂಡ್ಸ್ ವಾಹನ ಸಂಪೂರ್ಣ ಜಖಂಗೊಂಡು ಕಿಶೋರ್ ಶವ ವಾಹನದಲ್ಲೇ ಸಿಲುಕಿಕೊಂಡಿತ್ತು.

ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News