ಚಿಕ್ಕಮಗಳೂರು: ಹಾಲಿನ ಲಾರಿ ಅಪಘಾತ; ನಿರ್ವಾಹಕನಿಗೆ ಗಂಭೀರ ಗಾಯ

Update: 2018-12-10 14:06 GMT

ಚಿಕ್ಕಮಗಳೂರು, ಡಿ.10: ನಂದಿನಿ ಹಾಲು ಸಾಗಿಸುತ್ತಿದ್ದ ಲಾರಿಯ ಸ್ಟೇರಿಂಗ್ ತುಂಡಾಗಿ ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಲಾರಿ ನಿರ್ವಾಹಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಗರ ಸಮೀಪದಲ್ಲಿ ವರದಿಯಾಗಿದೆ.

ಹಾಸನದಿಂದ ನಂದಿನಿ ಹಾಲು ತರುತ್ತಿದ್ದ ಲಾರಿಯು ನಗರ ಹೊರವಲಯದಲ್ಲಿರುವ ರಾಮನಹಳ್ಳಿ ಬಡಾವಣೆಯ ರತ್ನಗಿರಿ ರಸ್ತೆಯಲ್ಲಿ ಮುಂಜಾನೆ ಸಂಚರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸ್ಟೇರಿಂಗ್ ತುಂಡಾಗಿದೆ ಎನ್ನಲಾಗಿದೆ. ಇದರಿಂದ ನಿಂಯಂತ್ರಣ ತಪ್ಪಿದ ಲಾರಿ ರಸ್ತೆ ಬದಿ ನಿಂತಿದ್ದ ಖಾಸಗಿ ಬಸ್‍ವೊಂದಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯಿಂದಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೆ, ಮತ್ತೊಂದು ಬದಿಯಲ್ಲಿ ಕುಳಿತಿದ್ದ ಕ್ಲೀನರ್ ನ ಎರಡೂ ಕಾಲುಗಳು ತುಂಡಾಗಿವೆ ಎಂದು ತಿಳಿದು ಬಂದಿದೆ.

ಗಾಯಗೊಂಡ ಚಾಲಕನನ್ನು ರವಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News