ಹಾಸನ: ರೈಲು ಢಿಕ್ಕಿ ಹೊಡೆದು ಕಾಡಾನೆ ಸಾವು

Update: 2018-12-10 14:26 GMT

ಹಾಸನ,ಡಿ.10: ರೈಲು ಢಿಕ್ಕಿ ಹೊಡೆದು ಕಾಡಾನೆಯೊಂದು ಕಾಕನ ಮನೆ ಗ್ರಾಮದ ಬಳಿ ಮೃತಪಟ್ಟ ಘಟನೆ ನಡೆದಿದೆ.

ಮುಂಜಾನೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರವಾರ ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಸಿಲುಕಿ ಆನೆ ಸಾವಿಗೀಡಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಧಾವಿಸಿ, ಕಾಡಾನೆ ಸಾವಿನ ಬಗ್ಗೆ  ಪರಿಶೀಲನೆ ನಡೆಸಿದರು. ಕಾಕನಮನೆ ಬಳಿಯ 800/30 ಮೈಲಿಗಲ್ಲಿನ ಬಳಿ ಈ ದುರ್ಘಟನೆ ನಡೆದಿದ್ದು, ಕಾಡಿನಿಂದ ಬಂದ ಆನೆಗಳು ಆಹಾರ ಹುಡುಕಿಕೊಂಡು ಬಳಿಕ ವಾಪಸ್ ಹಿಂಡಾಗಿ ಕಾಡಿಗೆ ಹಿಂದಿರುಗುವ ಸಂದರ್ಭದಲ್ಲಿ ಹಳಿ ದಾಟುವ ವೇಳೆ ಒಂದು ಆನೆ ಸಿಲುಕಿಕೊಂಡಿರಬಹುದು ಎನ್ನಲಾಗುತ್ತಿದೆ.

ಇತ್ತೀಚೆಗೆ ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಆದಷ್ಟು ಬೇಗ ಕಾಡಂಚಿನ ಭಾಗದಲ್ಲಿ ರೈಲ್ವೆ ಗೇಟ್‍ಗಳನ್ನು ನಿರ್ಮಿಸಿ ಮಾನವನು ನೆಮ್ಮದಿಯ ಬದುಕು ಸಾಗಿಸುವಂತೆ ಹಾಗೂ ಪ್ರಾಣಿಗಳ ಸಾವುಗಳನ್ನು ತಡೆಗಟ್ಟುವಲ್ಲಿ ಸರ್ಕಾರ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News