ಹನೂರು: ನಮ್ಮ ಗ್ರಾಮ-ನಮ್ಮ ಯೋಜನೆ ಗ್ರಾಮ ಸಭೆ

Update: 2018-12-13 17:22 GMT

ಹನೂರು,ಡಿ.13: ಪಿಜಿ ಪಾಳ್ಯ ಗ್ರಾಮ ಪಂ.ನ 'ನಮ್ಮ ಗ್ರಾಮ ನಮ್ಮ ಯೋಜನೆ'ಯ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಮಮತಾರಾಣಿ ಅಧ್ಯಕ್ಷತೆಯಲ್ಲಿ ನಡೆಯಿತು.

ಗುರುವಾರ ನಡೆದ ಸಭೆಯ ಆರಂಭದಲ್ಲಿಯೇ ಮಾಜಿ ಸದಸ್ಯೆ ಅಪ್ಪಾಜಿಯವರು ಮಾತನಾಡಿ, ಪಂಚಾಯತ್ ನಲ್ಲಿ ಅಧ್ಯಕ್ಷರಾಧಿಯಾಗಿ ಎಲ್ಲಾ ಸದಸ್ಯರು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದು ಪಂಚಾಯತ್ ನಿಯಮಗಳನ್ನು ಗಾಳಿಗೆ ತೂರುವ ಕೆಲಸಗಳನ್ನು ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಈ ಸಂದರ್ಭ ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಅಪ್ಪಾಜಿಯವರೇ ಸಭೆಯಿಂದ ಹೊರ ನಡೆದರು. ನಂತರ ಸಭೆಯನ್ನು ಉದ್ದೇಶಿಸಿ ಗ್ರಾಪಂ ಪಿಡಿಒ ಮರಿಸ್ವಾಮಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾರಾಣಿ, ನೂಡಲ್ ಅಧಿಕಾರಿ ಸಂಪತ್‍ ಕುಮಾರ್ ಆರೋಗ್ಯಇಲಾಖೆ ಅಧಿಕಾರಿ ಲತಾ, ಕೃಷಿ ಇಲಾಖೆ ಅಧಿಕಾರಿ ಉಪೇಂದ್ರಕುಮಾರ್, ಪಶುಪಾಲನೆಯ ಅಧಿಕಾರಿ ಸೇರಿದಂತೆ ಸದಸ್ಯರಾದ ದಂಡಯ್ಯ ಕೃಷ್ಣನಾಯಕ್, ಕರಾ ವಸೂಲಿಗಾರ ಸಿದ್ದೇಶ್ ಹಾಗೂ ಮುಖಂಡ ನಿಂಗಶೆಟ್ರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News