ಕೋಲಾರ: ಶ್ರೀ ಸಾಂಭಶಿವಮೂರ್ತಿ ಸ್ವಾಮೀಜಿ ನಿಧನ

Update: 2018-12-14 16:59 GMT

ಕೋಲಾರ,ಡಿ.14: ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕೋಲಾರದ ಕಮ್ಮಸಂದ್ರ ಕ್ಷೇತ್ರದ ಶ್ರೀ ಸಾಂಭಶಿವಮೂರ್ತಿ ಸ್ವಾಮೀಜಿ ಶುಕ್ರವಾರ ಇಹಲೋಕ ತ್ಯಜಿಸಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ 4.30 ಕ್ಕೆ ನಿಧನರಾದರು.

ಕಮ್ಮಸಂದ್ರದಲ್ಲಿ 108 ಅಡಿ ಎತ್ತರದ ಶಿವಲಿಂಗ ಸ್ಥಾಪನೆ ಮೂಲಕ ಹೆಸರು ಗಳಿಸಿದ್ದ ಅವರು, 40 ವರ್ಷಗಳಿಂದಲೂ ಕಮ್ಮಸಂದ್ರದ ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News