ತುಮಕೂರು: ರೈಲು ಹಳಿಗೆ ತಲೆ ಇಟ್ಟು ತಂದೆ-ಮಗ ಆತ್ಮಹತ್ಯೆ

Update: 2018-12-15 15:33 GMT

ತುಮಕೂರು,ಡಿ.15: ರೈಲಿಗೆ ತಲೆ ಕೊಟ್ಟು ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಗೋಕುಲ ಬಡಾವಣೆ ಬಳಿ ನಡೆದಿದೆ.

ಮರಿಯಪ್ಪ (56), ಮಗ ಸತೀಶ್ (26) ಮೃತಪಟ್ಟವರು ಎನ್ನಲಾಗಿದೆ. ಇವರು ತುಮಕೂರಿನ ಗೋಕುಲ ಬಡಾವಣೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಮರಿಯಪ್ಪಗೆ ಆರೋಗ್ಯ ಸಮಸ್ಯೆಯಿದ್ದ ಕಾರಣ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಲಾಗುತ್ತಿತ್ತು. ಈ ಕಾರಣಕ್ಕಾಗಿಯೇ ಆಸ್ಪತ್ರೆಗೆ ತೆರಳಿದ್ದ ತಂದೆ-ಮಗ ಹಿಂತಿರುಗುವ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದೇ ಕಾರಣಕ್ಕೆ ದಾರಿಯಲ್ಲಿ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News