ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯ ಕೊಲೆ: ಮೃತನ ಪತ್ನಿ, ಪ್ರಿಯಕರನ ಬಂಧನ

Update: 2018-12-20 16:24 GMT

ತುಮಕೂರು, ಡಿ.20: ಮಧುಗಿರಿ ತಾಲೂಕು ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿನ ಹೊಸಕೆರೆ ಕೆರೆಯಲ್ಲಿ ದೊರೆತ ಗಂಡಸಿನ ಶವ ಪ್ರಕರಣವನ್ನು ಪತ್ತೆ ಹೆಚ್ಚಿರುವ ಪೊಲೀಸರು ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದು, ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಕೊಲೆ ಇದಾಗಿದೆ ಎಂದು ತಿಳಿಸಿದ್ದಾರೆ.

ಡಿ.17ರಂದು ಹೊಸಕೆರೆ ಕೆರೆಯಲ್ಲಿ ಗಂಡಸಿನ ಶವವೊಂದು ತೆಲುತ್ತಿರುವ ವಿಚಾರವಾಗಿ ಬಂದ ದೂರಿನ ಅನ್ವಯ ಅಕ್ಕಪಕ್ಕದ ಗ್ರಾಮದವರನ್ನು ವಿಚಾರಿಸಲಾಗಿತ್ತು. ಬಳಿಕ, ಕೊರಟಗೆರೆ ತಾಲೂಕು ಗೊಲ್ಲಹಳ್ಳಿ ಗ್ರಾಮದ ಸಿದ್ದಪ್ಪ ಎಂಬುವವರು 'ಇದು ನನ್ನ ಮಗನ ಶವವಾಗಿದ್ದು, ಯಾರೋ ಕೊಲೆ ಮಾಡಿ ಎಸೆದು ಹೋಗಿದ್ದಾರೆ ಎಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಧುಗಿರಿ ಡಿವೈಎಸ್ಪಿ ಧರಣೇಶ್ ನೇತೃತ್ವದಲ್ಲಿ ತನಿಖೆ ನಡೆಸಿ, ಪ್ರಕರಣ ನಡೆದ 24 ಗಂಟೆಯೊಳಗೆ ಕೊಲೆಗೆ ಕಾರಣರಾದ ಮೃತನ ಪತ್ನಿ ರಮ್ಯ ಮತ್ತು ಆತನ ಪ್ರಿಯಕರ ಧನು ಎಂಬುವವರನ್ನು ಬಂಧಿಸಿದ್ದಾರೆ. ರಮ್ಯ ಮತ್ತು ಧನು ಅವರ ಅಕ್ರಮ ಸಂಬಂಧಕ್ಕೆ ಮೃತ ಗೋವಿಂದರಾಜು ಅಡ್ಡಿಯಾದನೆಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿ, ಕೆರೆಗೆ ಎಸೆದಿದ್ದಾರೆನ್ನಲಾಗಿದ್ದು, ಕೃತಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News