ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಮೆರವಣಿಗೆಗೆ ಚಾಲನೆ
Update: 2018-12-23 06:07 GMT
ಮೈಸೂರು, ಡಿ. 23: ಮೈಸೂರು ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಇಂಧೂದರ ಹೊನ್ನಾಪುರ ಅವರ ನೇತೃತ್ವದಲ್ಲಿ ಪಿರಿಯಾಪಟ್ಟಣದಲ್ಲಿ ಮೆರವಣಿಗೆ ನಡೆಯಿತು.
ಬೆಳ್ಳಿಯ ಸಾರೋಟಿನಲ್ಲಿ ಮೈಸೂರು ಪೇಟ ತೊಟ್ಟು ಅಸೀನರಾಗಿದ್ದ ಅಧ್ಯಕ್ಷರನ್ನು ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಕ ಬೀದಿಗಳಲ್ಲಿ ಸಾಗಿ ಪಿಯು ಕಾಲೇಜು ಮೈದಾನ ತಲುಪಿತು.