ರೈತ ಸಂಘದ ಉಪಾಧ್ಯಕ್ಷ ಮಕ್ತುಂಸಾಬ ತರ್ಲಗಟ್ಟಿ ನಿಧನ
Update: 2018-12-23 13:59 GMT
ಮುಂಡಗೋಡ, ಡಿ. 23: ಮುಂಡಗೋಡ ಪಟ್ಟಣದ ಮುಲ್ಲಾ ಓಣಿ ನಿವಾಸಿ ತಾಲೂಕ ರೈತ ಸಂಘದ ಉಪಾಧ್ಯಕ್ಷ ಮಕ್ತುಂಸಾಬ ತರ್ಲಗಟ್ಟಿ(70) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ರವಿವಾರ ಅಧಿಕ ರಕ್ತ ಒತ್ತಡದಿಂದ ಮೆದುಳಿಗೆ ಘಾಸಿಯಾಗಿತ್ತು. ಅವರಿಗೆ ಗುರುವಾರ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, ಪುತ್ರ, ಸೊಸೆ, ಇಬ್ಬರು ಸಹೋದರರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.