ಕಣ್ಣೂರು ಜಿಲ್ಲಾ ಸೌಹಾರ್ದ ವೇದಿಕೆ ವತಿಯಿಂದ ಡಾ. ಪಿ.ಸಿ ಹಸೈನಾರ್ ಹಾಜಿಗೆ ಸನ್ಮಾನ

Update: 2018-12-23 18:04 GMT

ಸಿದ್ಧಾಪುರ, ಡಿ. 23: ಸಾಮಾಜಿಕ ಸೇವಾ ರಂಗದಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸಿದ್ಧಾಪುರದ ಪಿ.ಸಿ ಹಸೈನಾರ್ ಹಾಜಿಗೆ ಕಣ್ಣೂರು ಜಿಲ್ಲಾ ಸೌಹಾರ್ದ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಣ್ಣೂರು ಸೆಂಟ್ರಲ್ ಅವನ್ಯೂ ಹೋಟೆಲ್ ಸಭಾಂಗಣದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿನೋದ್ ನಾರಾಯಣನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಅವರು ಡಾ. ಪಿ.ಸಿ ಹಸೈನಾರ್ ಹಾಜಿ ಅವರನ್ನು ಸನ್ಮಾನಿಸಿ ಮಾತನಾಡಿ, ಪರಿಸರ ಪ್ರೇಮಿ, ಸಮಾಜ ಸೇವಕ, ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ನಿರಂತರವ  ಸೇವೆಯನ್ನು ಗುರುತಿಸಿ ಪಿ.ಸಿ ಹಸೈನಾರ್ ಹಾಜಿ ಅವರಿಗೆ ಗ್ಲೋಬಲ್ ಪೀಸ್ ಯುನಿವರ್ಸಿಟಿಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವುದು ಕಣ್ಣೂರು ಮತ್ತು ಕೊಡಗು ಜಿಲ್ಲೆಗೆ ಸಿಕ್ಕಿದ ಗೌರವ ಪದವಿಯಾಗಿದೆ.

ಕೇರಳ ಹಾಗೂ ಕರ್ನಾಟಕದ ಎರಡು ರಾಜ್ಯಗಳ ಪರವಾಗಿ ರಾಜಕೀಯ ರಂಗದಲ್ಲಿಯು ಗುರುತಿಸಿಕೊಂಡು ಅಭಿವೃದ್ಧಿ ಕಾರ್ಯಗಳು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಮಾಜ ಸೇವೆಗಳ ಮೂಲಕ ಜನರ ಮಧ್ಯೆ ಸೌಹಾರ್ದ ಮೂಡಿಸುವಂತ್ತಾಗಿದೆ  ಎಂದರು.

ಈ ಸಂದರ್ಭ ಡಿಸಿಸಿ ಅಧ್ಯಕ್ಷ ಸದೀಶನ್ ಪಾಚೇನಿ, ಕೆಪಿಸಿಸಿ  ಕಾರ್ಯದರ್ಶಿ ವಿ.ಎ ನಾರಾಯಣನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಜೀವ್ ಜೋಸೆಫ್, ವಿರಾಜಪೇಟೆ ಮಾಜಿ ಶಾಸಕ ಹೆಚ್.ಡಿ ಬಸವರಾಜು, ಕಣ್ಣೂರು ಮಹಾನಗರ ಪಾಲಿಕೆ ಸದಸ್ಯರಾದ ಬಾಲಕೃಷ್ಣನ್ ಮಾಸ್ಟರ್, ಸಮೀರ್, ಬಿಜೆಪಿ ಜಿಲ್ಲಾಧ್ಯಕ್ಷ ಸತ್ಯ ಪ್ರಕಾಶ್, ಜನತಾದಳ ಜಿಲ್ಲಾಧ್ಯಕ್ಷ ಸಿ.ಪಿ ದಿವಾಕರನ್, ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಕೆ ಹ್ಯಾರಿಸ್‌ ,ಉಸ್ಮಾನ್ ಶುಂಠಿಕೊಪ್ಪ, ಕೆ.ಎಂ ಬಾವ ಸೇರಿದಂತೆ ಇತರರು ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News