ಅಭಯಾರಣ್ಯದಲ್ಲಿ ಹುಲಿ ಬೇಟೆ ಆರೋಪ: ಗಾಲ್ಫರ್ ಜ್ಯೋತಿ ರಾಂಧವ ಬಂಧನ

Update: 2018-12-26 07:17 GMT

ಹೊಸದಿಲ್ಲಿ, ಡಿ.26: ಉತ್ತರಪ್ರದೇಶದ ಹುಲಿ ಅಭಯಾರಣ್ಯದಲ್ಲಿ ಬೇಟೆಯಾಡಿದ ಆರೋಪ ಎದುರಿಸುತ್ತಿರುವ ಅಂತರ್‌ರಾಷ್ಟ್ರೀಯ ಮಟ್ಟದ ಗಾಲ್ಫರ್ ಜ್ಯೋತಿ ರಾಂಧವರನ್ನು ಬಂಧಿಸಲಾಗಿದ್ದು, ಅವರಿಂದ .22 ರೈಫಲ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಜ್ಯೋತಿ ರಾಂಧಾವರನ್ನು ದುಧ್ವಾ ಹುಲಿ ಅಭಯಾರಣ್ಯದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ವೃತ್ತಿಪರ ಗಾಲ್ಫರ್ ಆಗಿರುವ ರಾಂಧವ 2004 ಹಾಗೂ 2009ರ ನಡುವೆ ಹಲವು ಬಾರಿ ಅಧಿಕೃತ ವರ್ಲ್ಡ್ ಗಾಲ್ಫ್ ರ್ಯಾಂಕಿಂಗ್‌ನಲ್ಲಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದಾರೆ. ಏಶ್ಯನ್ ಟೂರ್ ಹಾಗೂ ಯುರೋಪಿಯನ್ ಟೂರ್‌ನಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News