ಕಳ್ಳತನ ಆರೋಪ: ಮನನೊಂದ ಯುವಕ ಆತ್ಮಹತ್ಯೆ

Update: 2018-12-26 12:32 GMT

ಹಾಸನ,ಡಿ.26: ಬಿಯರ್ ಬಾಟಲ್ ಕಳ್ಳತನದ ಆರೋಪ ಹಿನ್ನಲೆಯಲ್ಲಿ ಮನನೊಂದ ಯುವಕನೊರ್ವ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಂಚಮಾರನಹಳ್ಳಿಯಲ್ಲಿ ನಡೆದಿದೆ.

ಹಾಸನ ನಗರದ ಹೊರ ವಲಯ ಕೈಗಾರಿಕಾ ವಲಯದಲ್ಲಿ ಇರುವ ಬಿಯರ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಾಲೂಕಿನ ಕಂಚಮಾರನಹಳ್ಳಿ ಗ್ರಾಮದ ನಿವಾಸಿ ಸುನೀಲ್ (24) ವಿಷ ಕುಡಿದು ಸಾವನಪ್ಪಿದ ಯುವಕ. ಕಳೆದ ನಾಲ್ಕು ದಿನಗಳ ಹಿಂದೆ 11 ಬಿಯರ್ ಬಾಟಲಿ ಕಳವು ಮಾಡಿದ ಆರೋಪದಡಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮೂವರು ಕಾರ್ಮಿಕರ ಮೇಲೆ ಪ್ರಕರಣ ದಾಖಲಾಗಿತ್ತು. 

ಇವರಲ್ಲಿ ಸುನೀಲ್ ಎಂಬವನು ಕಳೆದ ಶುಕ್ರವಾರ ಕಂಚಮಾರನಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ವಿಷ ಸೇವನೆ ಮಾಡಿದ್ದನು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೈಸೂರಿನಲ್ಲಿ ಸುನೀಲ್ ಕೊನೆ ಉಸಿರೆಳೆದಿದ್ದಾನೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News