ಮೈಸೂರು: ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದೂರು

Update: 2018-12-28 16:55 GMT

ಮೈಸೂರು,ಡಿ.28: ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ತಮ್ಮ ಪುಸ್ತಕದಲ್ಲಿ ಶ್ರೀರಾಮನ ಕುರಿತು ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಸಂಘಟನೆಯ ಸಂಚಾಲಕ ಸಂಜಯ್ ವಿದ್ಯಾರಣ್ಯಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಕೊಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರೊ.ಭಗವಾನ್ ಅವರು ಪುಸ್ತಕ ಬರೆದಿದ್ದು, ಹಲವಾರು ಜನರು ಶ್ರೀರಾಮನನ್ನು ಆರಾಧಿಸುತ್ತಿದ್ದಾರೆ. ಅಂತಹದರಲ್ಲಿ ರಾಮ ಕುಡುಕ, ಕೊಲೆಗಡುಕ, ಸೀತೆಗೆ ಮದ್ಯ ಸೇವನೆ ಮಾಡಿಸುತಿದ್ದ, ಮಹಿಳೆಯರ ನೃತ್ಯ ನೋಡುತ್ತಿದ್ದ ಎಂದು ಅಪಮಾನಿಸಿದ್ದಾರೆ. ಹಾಗಾಗಿ ಹಿಂದೂ ಧಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News