ಗ್ರಾಹಕರ ಹಿತಾದೃಷ್ಠಿಯಲ್ಲಿ ವ್ಯವಹಾರ ನಡೆಸಿ: ಪ್ರಕಾಶ್ ಗೌಡ

Update: 2018-12-31 12:58 GMT

ಹಾಸನ, ಡಿ. 31: ಸಗಟು ವ್ಯಾಪಾರಿಗಳು ಕೇವಲ ವ್ಯಾಪಾರಿ ಮನೋಭಾವದ ಹಿನ್ನಲೆಯಲ್ಲಿ ವ್ಯವಹಾರ ನಡೆಸದೆ ರೈತರು ಹಾಗು ಗ್ರಾಹಕರನ್ನು ಹಿತದೃಷ್ಟಿ ಯಲ್ಲಿ ಇಟ್ಟುಕೊಂಡು ವ್ಯವಹಾರ ನಡೆಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಕಿವಿಮಾತು ಹೇಳಿದರು.

ಸಗಟು ತರಕಾರಿ ವರ್ತಕರ ಸಂಘ ಹಾಗು ಕಟ್ಟಿನಕೆರೆ ಮಾರುಕಟ್ಟೆ ತರಕಾರಿ ವರ್ತಕರ ಸಂಘ ಜಂಟಿಯಾಗಿ ಏರ್ಪಡಿಸಿದ್ದ 4ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ 2019 ರ  ಕಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು ರೈತರು ಈ ದೇಶದ ಬೆನ್ನೆಲುಬು ಅಲ್ಲದೆ ಎಲ್ಲರಿಗೂ ಬದುಕಲು ಅಗತ್ಯವಾದ ಆಹಾರ ಉತ್ಪಾದನೆ ಮಾಡಿ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವ ಅವನ ಶ್ರೇಯೋಭಿವೃದ್ಧಿ ಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ ಆರ್ ಉದಯ ಕುಮಾರ್ ಮಾತನಾಡಿ ಸಗಟು ವ್ಯಾಪಾರಿಗಳು ಬೆಲೆ ನಿಗಧಿ ವಿಷಯದಲ್ಲಿ  ರೈತರನ್ನು ಶೋಷಿಸುವುದು ತರವಲ್ಲ,  ವ್ಯಾಪಾರಸ್ಥರು ಹಾಗು ಗ್ರಾಹಕರು ರೈತನ ಎರಡು ಕಣ್ಣುಗಳಿದ್ದಂತೆ ಎಂದರು. ಸಗಟು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್. ಆನಂದ್ ಮಾತನಾಡಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

 ಮಂಜೇಗೌಡ, ಮಾಜಿ ಅಧ್ಯಕ್ಷರಾದ ಗೋಪಾಲ್ ಹಾಗು ಲಕ್ಷ್ಮಣ ಗೌಡ ಮಾತನಾಡಿದರು. ಪದಾಧಿಕಾರಿಗಳಾದ ದೊಡ್ಡೇಗೌಡ, ಬಿ.ಆರ್. ಶ್ರೀಹರಿ ಮತ್ತು ಹೆಚ್.ಸಿ. ದೇವರಾಜ್ ಉಪಸ್ಥಿತರಿದ್ದರು. ಇದಕ್ಕು ಮೊದಲು ಎಸ್ಪಿ ಕೇಕ್ ಕತ್ತರಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News