×
Ad

ವಿರೋಧದ ನಡುವೆಯೂ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣಕುಂಭ ಮೆರವಣಿಗೆ: ಪ್ರಗತಿಪರರು, ಸಾಹಿತಿಗಳಿಂದ ಖಂಡನೆ

Update: 2019-01-04 21:31 IST

ಧಾರವಾಡ,ಜ.4: ಇಂದು ಚಾಲನೆ ದೊರೆತ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿರೋಧದ ನಡುವೆಯೂ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ಮಾಡಿಸಿರುವ ಸಾಹಿತ್ಯ ಪರಿಷತ್ತು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಕ್ರಮವನ್ನು ಪ್ರಗತಿಪರರು, ಹೋರಾಟಗಾರರು ಹಾಗೂ ಹಲವಾರು ಸಾಹಿತಿಗಳು ತೀವ್ರವಾಗಿ ಖಂಡಿಸಿದ್ದಾರೆ.

"ಈ ಮೆರವಣಿಗೆಯು ಮಹಿಳೆಗೆ ಮಾಡುವ ಅವಮಾನ.‌ ಇದನ್ನು ಮಾಡಬೇಡಿ" ಎಂದು ಕನ್ನಡ ನಾಡಿನ ಅನೇಕ ಬರಹಗಾರರು, ಜೀವಪರ ಹೋರಾಟಗಾರರು, ಪತ್ರಕರ್ತರು ಮತ್ತು ಪ್ರಜ್ಞಾವಂತ ನಾಗರಿಕರು ಆಗ್ರಹಪಡಿಸಿದರೂ ಅದನ್ನು ಲಕ್ಷಿಸದೆ ಮೆರವಣಿಗೆ ಮಾಡಿರುವುದು ತಪ್ಪು. ಅವರ ಈ ಕ್ರಮವು ಸಾಹಿತ್ಯ ಪರಿಷತ್ತಿನಲ್ಲಿ ಇರುವವರು ನಿಜಕ್ಕೂ ಸಾಹಿತಿ ಬರಹಗಾರರೇ ಎಂಬ ಅನುಮಾನವನ್ನು ಹುಟ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೂರ್ಣಕುಂಭ ಮೆರವಣಿಗೆಯನ್ನು ವಿರೋಧಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮಹಿಳೆಯರು ಶಾಂತ ರೀತಿಯಿಂದ, ಕಪ್ಪು ಪಟ್ಟಿ ಧರಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದಾರೆ. ಎತ್ತರದ ಧ್ವನಿಯಲ್ಲಿ ಮಾತನಾಡಿ ಪ್ರತಿಭಟನಾ ನಿರತರನ್ನು ಹೆದರಿಸಿದ್ದಲ್ಲದೆ, ಅವರ ಬಳಿ ಇದ್ದ ಕಪ್ಪು ಪಟ್ಟಿಗಳನ್ನು ಬಲವಂತದಿಂದ ಕಸಿದುಕೊಂಡಿದ್ದಾರೆ. ನಂತರ ಸ್ಟಾಲ್ ಗೆ ನುಗ್ಗಿ, ಇನ್ನೂ ಎಷ್ಟು ಇಟ್ಟಿದ್ದೀರ ಎಂದು ಸ್ಟಾಲ್ ಜಾಲಾಡಿದ್ದಾರೆ.
ಶಾಂತಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹೀಗೆ ಹತ್ತಿಕ್ಕಿದ ಪೊಲೀಸರ ಕ್ರಮವನ್ನು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ನಮ್ಮ ಪ್ರತಿರೋಧವನ್ನು ಆಲಿಸಿ, ಮಾತನಾಡುವ ಸೌಜನ್ಯವೂ ಇಲ್ಲದ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನವನ್ನು ಆಯೋಜಿಸಿರುವ ಸ್ವಾಗತ ಸಮಿತಿಯ ಸದಸ್ಯರ ಈ ನಡೆ ಖಂಡನೀಯ. ಧಾರವಾಡದ ಜಿಲ್ಲಾ ಆಡಳಿತದಲ್ಲಿ ಡಿಸಿ, ಪೊಲೀಸ್ ಎಸ್ ಪಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ - ಈ ಮೂವರೂ ಮಹಿಳೆಯರಾಗಿದ್ದೂ ಇಂತಹ ಮೆರವಣಿಗೆ ನಡೆಸಿರುವುದು ಅವರ ಬೌದ್ಧಿಕ ದಾರಿದ್ರ್ಯವನ್ನು ತೋರಿಸುತ್ತದೆ. 

ನಾವು ನಮ್ಮ ಪ್ರತಿರೋಧದ ಪತ್ರವನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ, ಡಿಸಿ ಅವರಿಗೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ, ಪೊಲೀಸ್ ಎಸಿಪಿ ಅವರಿಗೆ, ಜಗದೀಶ್ ಶೆಟ್ಟರ್, ಲಿಂಗರಾಜ ಅಂಗಡಿ, ಅವರುಗಳಿಗೆ ಕಳುಹಿಸಿದ್ದೆವು ಎನ್ನುವುದನ್ನು ಇಲ್ಲಿ ದಾಖಲಿಸಲು ಇಚ್ಛಿಸುತ್ತೇವೆ. ಹಾಗೂ ಸಮ್ಮೇಳನಾಧ್ಯಕ್ಷರಿಗೆ ಖುದ್ದಾಗಿ ಫೋನಿನಲ್ಲಿ ಮಾತನಾಡಲಾಗಿತ್ತು.‌ ಜನರ ಬದುಕಿನ ಸೂಕ್ಷ್ಮಗಳೇ ಅರ್ಥವಾಗದ ಇಂತಹ ಸಮ್ಮೇಳನಗಳಿಗೆ ಧಿಕ್ಕಾರವಿರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಸಹಿ ಹಾಕುವ ಮೂಲಕ ಪೂರ್ಣಕುಂಭ ಮೆರವಣಿಗೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 

-ಸಹಿ- 

1. ಡಾ. ಪುರುಷೋತ್ತಮ ಬಿಳಿಮಲೆ, ಜೆ.ಎನ್.ಯು.
2. ನೀಲಾ ಕೆ., ಜನವಾದಿ ಮಹಿಳಾ ಸಂಘಟನೆ
3. ವಿಮಲಾ ಕೆ. ಎಸ್., ಜನವಾದಿ ಮಹಿಳಾ ಸಂಘಟನೆ
4. ಸಂಜ್ಯೋತಿ ವಿ.ಕೆ., ಚಿತ್ರ ನಿರ್ದೇಶಕರು
5. ರೇಣುಕಾ ನಿಡಗುಂದಿ, ಲೇಖಕರು
5ಅ. ಜ್ಯೋತಿ ಎ. ರಾಷ್ಟ್ರೀಯ ಮಹಿಳಾ ಒಕ್ಕೂಟ
6. ಡಿ. ಉಮಾಪತಿ, ಪತ್ರಕರ್ತರು
7. ಡಾ. ಮೀನಾಕ್ಷಿ ಬಾಳಿ, ಪ್ರೊಫೆಸರ್
8. ಸಿ. ಬಸವಲಿಂಗಯ್ಯ, ನಿರ್ದೇಶಕರು, ಎನ್.ಎಸ್.ಡಿ.
9. ಹನುಮಾಕ್ಷಿ ಗೋಗಿ, ಲೇಖಕರು, ಪ್ರಕಾಶಕರು
10. ಗಿರಿಧರ್ ಕಾರ್ಕಳ, ಕಲಾವಿದರು
11. ಹೇಮಲತಾ ಮೂರ್ತಿ, ಲೇಖರು, ಪತ್ರಕರ್ತರು
12. ಅನಂತ ನಾಯಕ್, ವಕೀಲರು
13. ಡಾ. ಸುಶಿ ಕಾಡನಕುಪ್ಪೆ, ವೈದ್ಯರು
14. ಗೀತಾ, ಎಲ್.ಐ.ಸಿ. 
15. ಗೌರಮ್ಮ, ಜನವಾದಿ ಮಹಿಳಾ ಸಂಘಟನೆ
16. ಸುಶೀಲ ಬಸವಲಿಂಗಯ್ಯ
17. ದೀಪಾ ಗಿರೀಶ್, ಲೇಖಕರು
18. ಜೊಹರಾ
19. ಶಾರದಾ ಕೆ.ಎಸ್. ಜನವಾದಿ ಮಹಿಳಾ ಸಂಘಟನೆ
20. ಡಾ. ಎಚ್.ಜಿ.ಜಯಲಕ್ಷ್ಮಿ, ವೈದ್ಯರು
21. ಡಾ. ಮಂಜುನಾಥ್
22. ಶ್ರೀನಿವಾಸ ಕಾರ್ಕಳ, ಲೇಖಕರು
23. ಟಿ. ಸುರೇಂದ್ರರಾವ್, ಸಮುದಾಯ
24. ಸುಮಾ ಎಸ್, ಉಪನ್ಯಾಸಕರು
25. ಭಾರತಿ ಪ್ರಶಾಂತ್
26. ಇಂದಿರಾ ಪ್ರಸಾದ್
27. ಮೀನಾಕುಮಾರಿ ಬೀದರ್, ಜನವಾದಿ ಮಹಿಳಾ ಸಂಘಟನೆ
28. ಲಕ್ಷ್ಮಿ ಕೆ.ಎಸ್.‌ ಜನವಾದಿ ಮಹಿಳಾ ಸಂಘಟನೆ
29. ಎನ್. ವಿ. ಸೌಮ್ಯರಾಣಿ
30. ಮಹೇಶ್ ಇರಸವಾಡಿ
31. ಸದಾಶಿವ ಮೇತ್ರಿ
32. ವಾಸುದೇವ ನಾಡಿಗ್
33. ಗಿರಿಜರ್ ರಾಮ
34. ಶ್ರೀನಿವಾಸ ದಿನ್ನೆ
35. ಸುಭಾನು ರರವಿ
36. ಸೌಭಾಗ್ಯ ಚನ್ನಬಸಪ್ಪ, ಬೇಲೂರು
37. ಲತಾ ಮುನಿಯಪ್ಪ
38. ಗೀತಾ ಉಪೇಂದ್ರ, ಬೆಂಗಳೂರು
39. ಬಿ ರಾಜಶೇಖರ ಮೂರ್ತಿ
40. ಸಂಧ್ಯಾರಾಣಿ, ಬೆಂಗಳೂರು
41. ರೇಣುಕಾ ರಮಾನಂದ
42. ಮೋಹನ್ ಕೋರಿ
43. ದಾಕ್ಷಾಯಿಣಿ ಹುಡೇದ್, ವಿಜಯಪುರ
44. ಶರಣಪ್ಪ ಸಜ್ಜನ್
45. ಪ್ರವೇಣಿ ಸ್ಫೂರ್ತಿ
46. ಅಮೃತವಲ್ಲಿ
47. ಪ್ರಭಾ ಎನ್. ಬೆಳವಂಗಲ, ದೊಡ್ಡಬಳ್ಳಾಪುರ
48. ಕಳಲೆ ಶ್ರೀನಿವಾಸರಂಗ ಪಾರ್ಥಸಾರಥಿ, ಬೆಂಗಳೂರು
49. ಸುಮಂಗಲಾ ಜಿ. ಎಂ., ಲೇಖಕರು, ಬೆಂಗಳೂರು
50. ಸತ್ಯಾ ಎಸ್. ಬೆಂಗಳೂರು
51. ಚೇತನಾ ತೀರ್ಥಹಳ್ಳಿ, ಬೆಂಗಳೂರು
52. ಅನ್ವರ ಹುಬ್ಬಳ್ಳಿ,  
53. ರಜನಿ ಗರುಡ, ಧಾರವಾಡ
54. ಸುನಂದಾ ಕಡಮೆ, ಹುಬ್ಬಳ್ಳಿ
55. ಪ್ರಕಾಶ ಕಡಮೆ, ಹುಬ್ಬಳ್ಳಿ
56. ಕಾವ್ಯಾ ಕಡಮೆ, ಅಮೆರಿಕ
57. ನವ್ಯಾ ಕಡಮೆ, ಹುಬ್ಬಳ್ಳಿ
58. ಗುಲಾಬಿ ಬಿಳಿಮಲೆ, ಮಂಗಳೂರು
59. ಶಿವಾನಂದ ನಾಗೂರ
60. ಲಿನೆಟ್, ಧಾರವಾಡ
61. ಶಾರದಾ ಪಾಟೀಲಾ
62. ಶುಭಾ ಮರವಂತೆ
63. ಶ್ರೀ ಲಕ್ಷ್ಮೀ ವೈ.ಎಸ್
64. ರಾಜೇಶ್ವರಿ ಜೋಶಿ 
65. ಶಾರದಾ ಗೋಪಾಲ, ಧಾರವಾಡ
66. ಸಬಿತಾ ಬನ್ನಾಡಿ, ಶಿವಮೊಗ್ಗ
67. ಚಾರ್ವಾಕ ರಾಘು,ಸಾಗರ
68. ಸರೋಜ ಎಮ್.ಎಸ್. ಸಾಗರ
69. ಶಿವಿ ಕೊಪ್ಪಳ
70. ವಿನಯಾ, ಧಾರವಾಡ
71. ಎಂ.ಡಿ ಒಕ್ಕುಂದ, ಧಾರವಾಡ
72. ಪೃಥ್ವಿ ಒಕ್ಕುಂದ, ಧಾರವಾಡ
73. ನಭಾ ಒಕ್ಕುಂದ, ಧಾರವಾಡ
74. ಡಾ. ಅರುಂಧತಿ ಡಿ, ತುಮಕೂರು
75. ಡಾ. ಗೋಪಾಲ ದಾಬಡೆ, ಧಾರವಾಡ
76. ಪೂಜಾ ದಾಬಡೆ, ಧಾರವಾಡ
77. ವಿಶಾಲಾಕ್ಷಿ ಶರ್ಮಾ
78. ಕೃತಿ ಆರ್.
79. ನಸ್ರೀನ್ ಮಿಠಾಯಿ
80. ಮಂಜುಳಾ ಎಚ್.
81. ಬಸಂತಿ ಹಪ್ಪಳದ
82. ಸರೋಜಾ ಲೋಡಾಯ
83. ಭುವನೇಶ್ವರಿ ಕಾಂಬಳೆ
84. ಮರ್ಲಿನ್ ಮಾರ್ಟಿಸ್, ಮಂಗಳೂರು
85. ಎಸ್. ಅರುಂಧತಿ
86. ವ್ಯಾಸ ದೇಶಪಾಂಡೆ
87. ಅಖಿಲಾ ವಿದ್ಯಾಸಂದ್ರ, ವಕೀಲರು, ಬೆಂಗಳೂರು
88. ಪ್ರೇಮಾ ನಡುವಿನಮನಿ
89. ವೃಂದಾ ಹೆಗಡೆ
90. ನರ್ಮದಾ ಕುರ್ತಕೋಟಿ
91. ದೇವಿಕಾ
92. ಬಸೂ ಸುಳಿಭಾವಿ, ಧಾರವಾಡ
93. ಕನಸು, ಧಾರವಾಡ
94. ದು.ಸರಸ್ವತಿ, ವಿಜಯಪುರ
95. ವಾಣಿ ಪೆರಿಯೊಡಿ, ಬಂಟ್ವಾಳ
96. ಎಚ್ ಎಸ್ ಅನುಪಮಾ, ಹೊನ್ನಾವರ
97. ಕೃಷ್ಣ ಗಿಳಿಯಾರ, ಹೊನ್ನಾವರ
98. ಗವಾನಿ ದುರದುಂಡಿ
99. ಮಾಧವಿ ಭಂಡಾರಿ, ಶಿರಸಿ
100. ವಿಠ್ಠಲ ಭಂಡಾರಿ, ಸಿದ್ದಾಪುರ
101. ಯಮುನಾ ಗಾಂವಕಾರ, ಕಾರವಾರ
102. ಸಚಿನ್ ಅಂಕೋಲಾ
103. ಉಮೇಶ ನಾಯ್ಕ
104. ಶ್ರೀದೇವಿ ಕೆರೆಮನೆ, ಕಾರವಾರ
105. ಶಂಕರಗೌಡ ಸಾತ್ಮಾರ
106. ವರುಣ ಕುರ್ತಕೋಟಿ
107. ಮಂಜುಳ ಸುನಿಲ್
108. ಡಾ.ಎಂ. ಜಯಶ್ರೀ
109. ಉಷಾ ಅಂಬ್ರೋಸ್, ಮೈಸೂರು
110. ರೇಖಾಂಬ, ಶಿವಮೊಗ್ಗ
111. ಜ್ಯೋತಿ ಹಿಟ್ನಾಳ, ಕೊಪ್ಪಳ
112. ಅಕ್ಷತಾ ಹುಂಚದಕಟ್ಟೆ, ಶಿವಮೊಗ್ಗ
113. ಗೌರಿ
114. ಮಲ್ಲಿಗೆ
115. ಪೂರ್ಣಿಮಾ
116. ಚೆನ್ನಮ್ಮ
117. ಕಾವ್ಯ
118. ಹೇಮಲತ
119. ಪದ್ಮ ಕೆ.ರಾಜ್
120. ಪುಷ್ಪಲತಾ
121. ಗುರು ಸುಳ್ಯ
122. ವೀಣಾ ಸುಳ್ಯ
123. ನವ್ಯ ಉದಯ
124. ಭಾಗ್ಯ ಮರವಾಸಿ, ಉಡುಪಿ
125. ಹರ್ಷಕುಮಾರ ಕುಗ್ವೆ, ಉಡುಪಿ
126. ಪ್ರತಿಭಾ ಆರ್
127. ದಾಕ್ಷಾಯಿನಿ 
128. ದಿಲಶಾದ
129. ಸುವರ್ಣ ಕುಠಾಳೆ
130. ಕೆ. ಶರೀಫಾ, ಬೆಂಗಳೂರು
131. ಮುನೀರ್ ಕಾಟಿಪಳ್ಳ, ಡಿವೈಎಫ್ ಐ, ಮಂಗಳೂರು
132. ಕಿರಣ್ ಭಟ್, ಕಾರವಾರ
133. ಪೀರ್ ಬಾವ್ ಜಿ, ರಾಯಚೂರು
134. ಸಂಧ್ಯಾರೆಡ್ಡಿ
135. ಕಿರಣ್ ಉಳ್ಳಿಗೇರಿ
136. ಉಗಮ ಶ್ರೀನಿವಾಸ್
137. ಬಸವರಾಜ್ ಪೂಜಾರ್
138. ರುದ್ರಪ್ಪ ಪಗಡದಿನ್ನಿ
140. ಅಶ್ವಿನಿ ಮದನ್ ಕರ್, ಕಲಬುರ್ಗಿ
141. ಕಿಶೋರ್ ಅತ್ತಾವರ, ಮಂಗಳೂರು
142. ಡಾ. ಖಾನಾಪುರೆ, ಕಲಬುರ್ಗಿ
143.  ವಿ. ಎಲ್ . ನರಸಿಂಹಮೂರ್ತಿ, ಸಂಶೋಧನಾ ವಿದ್ಯಾರ್ಥಿ
144. ಐವಾನ್ ಡಿ ಸಿಲ್ವಾ, ಮಂಗಳೂರು
145. ಶಶಿ ಸಂಪಳ್ಳಿ, ಪತ್ರಕರ್ತರು
146. ರೇಣುಕಾಂಬಿಕೆ - ಚಿತ್ರಕತಾಲೇಖಕಿ
147. ಹರೀಶ್ ಎಂ. ಜಿ., ಸಹಾಯಕ ಪ್ರಾಧ್ಯಾಪಕರು
148. ಬಾಬು ಈಶ್ವರ್ ಪ್ರಸಾದ್,  ಕಲಾವಿದರು, ಚಿತ್ರ ನಿರ್ದೇಶಕರು
149. ಪುನೀತ್, ವಕೀಲರು, ಮಂಗಳೂರು
150.  ಉದಯ್ ಇಟಗಿ
151. ಡಾ.ಸಿ.ರವೀಂದ್ರನಾಥ್, ಸಹ ಪ್ರಾಧ್ಯಾಪಕ, ಮೈಸೂರು ಮೆಡಿಕಲ್ ಕಾಲೇಜು
152. ಸುಮನಾ ಕಿತ್ತೂರು, ಚಿತ್ರ ನಿರ್ದೇಶಕರು
153. ಮಂಜುನಾರಾಯಣ್, ರಂಗಭೂಮಿ ಕಲಾವಿದ
154. ಮಾಲತಿ ಮುದಕವಿ, ಧಾರವಾಡ
155. ಹರೀಶ್ ಶೆಟ್ಟಿ ಬಂಡ್ಸಾಲೆ, ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ.
156. ಶಿವಕುಮಾರ್ ಮಾವಲಿ , ಇಂಗ್ಲಿಷ್ ಉಪನ್ಯಾಸಕರು
157. ಎಂ.ಎಸ್. ಪ್ರಕಾಶ್ ಬಾಬು, ಚಿತ್ರ ನಿರ್ದೇಶಕರು
158.ರಿಯಾಝ್ ಬೆಂಗ್ರೆ, ಮಂಗಳೂರು
159. ಕನಕರಾಜು ಆರನಕಟ್ಟೆ, ಕಥೆಗಾರರು, ಚಿತ್ರ ನಿರ್ದೇಶಕರು
160. ರಾಜೇಶ್ವರಿ, ಲೇಖಕರು
161. ರತಿ ರಾವ್, ಮೈಸೂರು
162. ವಿಶಾಲಮತಿ, ಪುಸ್ತಕಪ್ರೀತಿ, ಬೆಂಗಳೂರು
163. ಕಿರಣಕುಮಾರಿ
164. ಎಸ್.‌ಕೆ. ನೇತ್ರಾವತಿ
165. ದೇವಿ, ಜನವಾದಿ ಮಹಿಳಾ ಸಂಘಟನೆ, ಮಳವಳ್ಳಿ
166. ಬಸವರಾಜು, 
167. ಎನ್ ಗಾಯತ್ರಿ
168. ಕಾವ್ಯಾ ಅಚ್ಯುತ್
169. ಶೃತಿ ಮಾಕನಹಳ್ಳಿ
170. ಹುಲಿಕುಂಟೆ ಮೂರ್ತಿ

ಇನ್ನೂ ಮೊದಲಾದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News