ದಲಿತರ ಸ್ವಾಭಿಮಾನ ಬಡಿದೆಬ್ಬಿಸಿದ "ಜೀವದ ಹಾಡುಗಳು"

Update: 2019-01-10 14:53 GMT

ಚಿಕ್ಕಮಗಳೂರು, ಜ.10:  ಇಕ್ರಲಾ ಒದಿಲ್ರಾ, ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ, ನನ್ನ ಜನ ನಿನ್ನೆ ದಿನ, ಎಲ್ಲಿದ್ದರೋ ಅವರು ಹೆಂಗಿದ್ದರೋ ಅವರೆಚ್ಚೆತ್ತಸಿಂಹಗಳು ನನ್ನ ಜನಗಳು... ದಲಿತರ ಬಂಡಾಯದ ಗೀತೆಗಳು  ದಲಿತರ ಸಾವು, ನೋವು, ಹಸಿವು, ಅವಮಾನಗಳು ಹಾಗೂ ಪ್ರಸ್ತುತ ಎಚ್ಚರಗೊಳ್ಳಬೇಕಾದ ಅನಿವಾರ್ಯತೆಯನ್ನು ಹಾಡಿನ ಮೂಲಕ ತೆರೆದಿಡುವಲ್ಲಿ ಮೈಸೂರಿನ ಜೆನ್ನಿ ಕಲಾ ತಂಡವು ಬುಧವಾರ ದಲಿತ ಸಂಘರ್ಷ ಸಮಿತಿ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ  ಜೀವಜೀವದ ಹಾಡುಗಳು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಯಶಸ್ವಿಯಾಯಿತು.

ಮೈಸೂರಿನ ದಲಿತ ಸಾಹಿತಿ ಜೆನ್ನಿ ಸಾಂಸ್ಕøತಿಕ ತಂಡ 1980ರ ದಶಕದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ವಿರಚಿತ ಹೋರಾಟ ಹಾಡುಗಳು,  ಬುದ್ಧ,  ಬಸವ, ಅಂಬೇಡ್ಕರ್ ಕುರಿತ ಗೀತೆಗಳು, ಕವಿ ನಿಸಾರ್ ಅಹ್ಮದ್ ಅವರ ಕುರಿಗಳು ಸಾರ್ ಕುರಿಗಳು, ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ ಆಕಾಶದ ಅಗಲಕ್ಕೂ ನಿಂತ ಆಲವೆ ಎಂಬ ಅಂಬೇಡ್ಕರ್ ಕುರಿತ ಗೀತೆಗಳು ಕಲಾಮಂದಿರದಲ್ಲಿ ಸತತ 3 ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದವಲ್ಲದೇ ದಲಿತರ ಸ್ವಾಭಿಮಾನದ ಪ್ರಜ್ಞೆಯನ್ನು ತಿವಿಯುವ ಪ್ರಯತ್ನ ಮಾಡಿದವು.

ಕಾರ್ಯಕ್ರಮದುದ್ದಕ್ಕೂ ದಲಿತ, ಬಂಡಾಯ ಸಾಹಿತ್ಯದೊಂದಿಗೆ ಜಾನಪದ ಗೀತೆಗಳನ್ನು ಹಾಡುವುದರೊಂದಿಗೆ ಅದರ ಸಾರಾಂಶದ ವಿಶ್ಲೇಷಣೆಯನ್ನು ಮೈಸೂರು ಜೆನ್ನಿ ಸ್ವಾರಸ್ಯಕರವಾಗಿ ವಿವರಿಸಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸತ್ಯ ಹೇಳಿದವರನ್ನು ಮಿಥ್ಯೆಯ ಮನೆಯೊಳಗೆ ದೂಡಲಾಗುತ್ತಿದೆ. ಇದು ಹಿಂದಿನ ಬುದ್ದ, ಬಸವ, ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ. ಹಿಂದೆ ಪ್ರಸಿದ್ದ ವಿಜ್ಞಾನಿ ಗೆಲಿಲಿಯೋ ಭೂಮಿ ಗುಂಡಾಗಿದೆ. ಅದು ಸುತ್ತುತ್ತಿದೆ ಎಂದು ವೈಜ್ಞಾನಿಕವಾಗಿ ವಾದಿಸಿದ. ಆದರೆ, ಮೂಲಭೂತವಾದಿ ಪೆÇೀಪ್‍ಗಳು ಆತನಿಗೆ ಶಿಕ್ಷೆ ನೀಡಿದರು. ಕ್ರಮೇಣ ಆತಬ ಸತ್ಯವನ್ನು ಪ್ರಪಂಚವೇ ಒಪ್ಪಿಕೊಳ್ಳಬೇಕಾಯಿತು. ದೇಶದಲ್ಲಿಯೂ ದೇವರು, `ಧರ್ಮದ ಹೆಸರಲ್ಲಿ ಮತಾಂಧರು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ನಮ್ಮನ್ನು ಮೌಢ್ಯದಲ್ಲಿಯೇ ಇರಿಸುವ ಪ್ರಯತ್ನ ನಡೆದಿದೆ. ದಲಿತರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ವೈಜ್ಞಾನಿಕ ಚಿಂತನೆಯೊಂದಿಗೆ ಸಂಘಟಿತರಾಗಿ ಶೋಷಣೆ ವಿರುದ್ಧ ಹೋರಾಡುವ ಮನೋಬಾವ ಬೆಳೆಸಿಕೊಳ್ಳಬೇಕು ಎಂದು ಜೆನ್ನಿ ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ರಾಜ್ಯ  ಸಂಘಟನಾ ಸಂಚಾಲಕ ಸಿದ್ದಲಿಂಗಯ್ಯ, ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ಹೆಬ್ಬಾಲೆ ಲಿಂಗರಾಜು, ಜಿ.ಸಂಚಾಲಕ ಮಹೇಶ್, ತಾ. ಸಂಚಾಲಕ ಕೂದುವಳ್ಳಿ ದೇವರಾಜ, ನಂದಿಶೇಖರ್, ಮಂಜುನಾಥ್, ಅಂಗಡಿ ಚಂದ್ರು ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News