ಬೆಂಗಳೂರು: ರಂಗ ನಿರ್ದೇಶಕ ಪ್ರಸನ್ನಗೆ ಚಾಕ್ಯಾರ್ ಪ್ರಶಸ್ತಿ ಗರಿ

Update: 2019-01-11 16:29 GMT

ಬೆಂಗಳೂರು, ಜ.11: ಕೇರಳ ಸಂಗೀತ ನಾಟಕ ಅಕಾಡೆಮಿ ವತಿಯಿಂದ ನೀಡುವ ಪ್ರತಿಷ್ಠಿತ ‘ಅಮ್ಮನ್ನೂರ್ ಮಾಧವನ್ ಚಾಕ್ಯಾರ್’ ಪ್ರಶಸ್ತಿಯನ್ನು ಈ ಬಾರಿ ರಂಗ ನಿರ್ದೇಶಕ ಪ್ರಸನ್ನರವರಿಗೆ ನೀಡಿ ಗೌರವಿಸಲಾಗುತ್ತಿದೆ.

 ಪ್ರಶಸ್ತಿಯನ್ನು ಜ.20 ರಂದು ಸಂಜೆ 5ಕ್ಕೆ ತ್ರಿಶೂರ್‌ನಲ್ಲಿ ನಡೆಯಲಿರುವ ಕೇರಳ ಅಂತರ್‌ರಾಷ್ಟ್ರೀಯ ನಾಟಕ ಉತ್ಸವ (ಇಟ್ಛಾಕ್) ಉದ್ಘಾಟನೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 3 ಲಕ್ಷ ರೂ. ನಗರದು ಒಳಗೊಂಡಿದ್ದು, ಈ ಹಿಂದೆ ಬಾದಲ್ ಸರ್ಕಾರ್, ಸಾಬಿತ್ರಿ ಹೈಸ್ನಂ, ಗಿರೀಶ ಕಾರ್ನಾಡರವರು ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News