ತ್ರಿವಳಿ ತಲಾಕ್ ನಿಷೇಧಿಸಿ ಅಧ್ಯಾದೇಶದ ಮರು ಘೋಷಣೆ

Update: 2019-01-13 16:29 GMT

ಹೊಸದಿಲ್ಲಿ,ಜ.13: ದಿಢೀರ್ ತ್ರಿವಳಿ ತಲಾಕ್ ಪದ್ಧತಿಯನ್ನು ನಿಷೇಧಿಸಿ ಅಧ್ಯಾದೇಶವನ್ನು ಸರಕಾರವು ಶನಿವಾರ ಪುನಃ ಹೊರಡಿಸಿದೆ. ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಅಧ್ಯಾದೇಶ,2019ರಡಿ ದಿಢೀರ್ ತ್ರಿವಳಿ ತಲಾಕ್ ಮೂಲಕವಿಚ್ಛೇದನ ನೀಡುವುದು ಕಾನೂನುಬಾಹಿರವಾಗಿರುತ್ತದೆ ಮತ್ತು ಪತಿಗೆ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದೆ.

2018,ಸೆಪ್ಟೆಂಬರ್‌ನಲ್ಲಿ ಹೊರಡಿಸಿದ್ದ ಅಧ್ಯಾದೇಶವನ್ನು ಕಾನೂನನ್ನಾಗಿಸುವ ಮಸೂದೆಯನ್ನು ಲೋಕಸಭೆಯು ಡಿಸೆಂಬರ್‌ನಲ್ಲಿ ಅಂಗೀಕರಿಸಿದೆಯಾದರೂ,ಅದು ರಾಜ್ಯಸಭೆಯಲ್ಲಿ ಬಾಕಿಯಾಗಿದೆ. ಮಸೂದೆಗೆ ಸಂಸತ್ತಿನ ಅಂಗೀಕಾರ ದೊರೆಯದ್ದರಿಂದ ಹೊಸದಾಗಿ ಅಧ್ಯಾದೇಶವನ್ನು ಹೊರಡಿಸಲಾಗಿದೆ. ಈ ಪ್ರಕ್ರಿಯೆಗೆ ಕೇಂದ್ರ ಸಂಪುಟವು ಕಳೆದ ವಾರ ಒಪ್ಪಿಗೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News