ಶಿವಮೊಗ್ಗ: ಗಾಂಜಾ ಅಮಲಿನಲ್ಲಿ ವ್ಯಕ್ತಿಯ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ

Update: 2019-01-14 17:06 GMT

ಶಿವಮೊಗ್ಗ, ಜ.14: ಗಾಂಜಾ ಅಮಲಿನಲ್ಲಿದ್ದ ಮೂವರು ಯುವಕರು ವ್ಯಕ್ತಿಯೋರ್ವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಭಾನುವಾರ ರಾತ್ರಿ ನಗರದ ಬೈಪಾಸ್ ರಸ್ತೆಯ ನಂದನ ಕಾಲೇಜ್ ಬಳಿ ನಡೆದಿದೆ.

ಜ್ಯೋತಿನಗರದ ನಿವಾಸಿ ಮಂಜುನಾಥ್ (30) ಎಂಬವರೇ ಗಾಯಗೊಂಡವರೆಂದು ಗುರುತಿಸಲಾಗಿದೆ. ಇವರು ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹಲ್ಲೆಕೋರರಲ್ಲಿ ಓರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಉಳಿದ ಇಬ್ಬರು ಪರಾರಿಯಾಗಿದ್ದಾರೆ.

ಮಂಜುನಾಥ್‍ರವರು ಲಕ್ಕಿನಕೊಪ್ಪದಲ್ಲಿರುವ ಕೋಳಿಫಾರಂಗೆ ನಡೆದುಕೊಂಡು ಹೋಗುವಾಗ ನಂದನ ಕಾಲೇಜಿನ ಬಳಿ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿಯರ್ ಬಾಟಲಿನಿಂದ ಮಂಜುನಾಥ್‍ರವರ ಮುಖ ಹಾಗೂ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಇವರ ಕೂಗಾಟ ಗಮನಿಸಿ ಸಾರ್ವಜನಿಕರು ಸ್ಥಳಕ್ಕಾಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಲು ಮುಂದಾಗಿದ್ದು, ಓರ್ವನನ್ನು ನಾಗರಿಕರು ಹಿಡಿಯುವಲ್ಲಿ ಸಫಲವಾಗಿದ್ದಾರೆ. ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News