ಶ್ರೀರಂಗಪಟ್ಟಣ: ಕರೀಘಟ್ಟ ಪ್ರವಾಸಿತಾಣದಲ್ಲಿ ಬೆಂಕಿ; ಹಲವು ಎಕರೆ ಅರಣ್ಯ ಭೂಮಿ ಭಸ್ಮ

Update: 2019-01-16 17:07 GMT

ಮಂಡ್ಯ,ಜ.16: ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಕರೀಘಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ಹತ್ತಾರು ಎಕರೆ ಅರಣ್ಯ ಭೂಮಿ ಮರಗಳ ಸಹಿತ ಬೆಂಕಿಯ ಜ್ವಾಲೆಗೆ ಬೆಂದುಹೋಗಿದೆ.

ಶ್ರೀನಿವಾಸ ಅಗ್ರಹಾರ ಗ್ರಾಮದ ಸಮೀಪದ ಕರೀಘಟ್ಟದಲ್ಲಿ ಎತ್ತರವಾಗಿ ಹುಲ್ಲು ಬೆಳೆದಿದ್ದು, ಒಣಗಿದ್ದವು. ಶ್ರೀನಿವಾಸ ದೇವಾಲಯದ ಮುಂಭಾಗದ ಈ ಬೆಟ್ಟಕ್ಕೆ ಚಿನ್ನನಾಯಕನಹಳ್ಳಿ ಭಾಗದಿಂದ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ವಾತಾವರಣದಲ್ಲಿ ಗಾಳಿ ಬೀಸಿದಂತೆಲ್ಲಾ ಬೆಂಕಿಯ ಜ್ವಾಲೆ ಇತರೆಡೆಗೂ ಹಬ್ಬಿ ಬೆಂಕಿಗೆ ಹತ್ತಾರು ಎಕರೆ ಬೆಟ್ಟದ ಪ್ರದೇಶ, ಮರಗಿಡಗಳು ಸೇರಿದಂತೆ ಬೆಟ್ಟದಲ್ಲಿದ್ದ ಪ್ರಾಣಿಪಕ್ಷಿ, ಸೂಕ್ಷ್ಮಜೀವಿಗಳು ಬೆಂದು ಹೋಗಿವೆ.

ಬುಧವಾರ ಬೆಳಗ್ಗೆ ಸುಮಾರು 10ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಇಲಾಖೆ ಸಿಬ್ಬಂದಿಗಳೇ ಬೆಟ್ಟದಲ್ಲಿ ಹೊತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News