'ಆಪರೇಷನ್' ಪದ ಸೃಷ್ಟಿಸಿದ್ದೇ ಯಡಿಯೂರಪ್ಪ: ಸಿದ್ಧರಾಮಯ್ಯ

Update: 2019-01-17 16:30 GMT

ಹುಬ್ಬಳ್ಳಿ,ಜ.17: 'ಆಪರೇಷನ್' ಎಂಬ ಪದವನ್ನು ಪ್ರಾರಂಭಿಸಿದ್ದೇ ಯಡಿಯೂರಪ್ಪನವರು, ಪ್ರಜಾಪ್ರಭುತ್ವದಲ್ಲಿ ಇದೊಂದು ರೋಗ ಇದ್ದ ಹಾಗೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆ ಇಲ್ಲ. ಇದು ಒಂದು ಅಸಹ್ಯ ರಾಜಕಾರಣ. ನಮ್ಮ ಪಕ್ಷದವರು ಯಾರು ಬಿಜೆಪಿಗೆ ಹೋಗಲ್ಲ. ನಾವು ಯಾರಿಗೂ ಮಂತ್ರಿಗಿರಿ ನೀಡುವ ಭರವಸೆ ನೀಡಿಲ್ಲ. ಸದ್ಯಕ್ಕೆ ಮಂತ್ರಿ ಮಂಡಲದಲ್ಲಿ ಬದಲಾವಣೆ ಇಲ್ಲ. ಕಾಂಗ್ರೆಸ್ ಶಾಸಕಾಂಗ ಸಭೆಗೆ ಎಲ್ಲರೂ ಹಾಜರಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News