ಬೆಳಗಾವಿಯಲ್ಲಿ ದೇಶದಲ್ಲಿಯೇ ಮೊದಲ ಅಂಚೆಯಣ್ಣನ ಪ್ರತಿಮೆ ಅನಾವರಣ

Update: 2019-01-18 17:43 GMT

ಮಡಿಕೇರಿ, ಜ.18: ದೇಶದಲ್ಲಿಯೇ ಮೊದಲ ಅಂಚೆಯಣ್ಣನ ಪ್ರತಿಮೆ ಕುಂದಾನಗರಿ ಬೆಳಗಾವಿಯಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿತು. ಕಂಚಿನಿಂದ ತಯಾರಾಗಿರುವ ಪೋಸ್ಟ್ ಮ್ಯಾನ್ ಪ್ರತಿಮೆ 8 ಅಡಿ ಎತ್ತರ, 350 ಕೆ.ಜಿ. ತೂಕವಿದೆ.

ಪ್ರತಿಮೆ ಸ್ಥಾಪನೆಯಾಗಿರುವ ಹೃದಯ ಭಾಗಕ್ಕೆ ‘ಫೋಸ್ಟ್ ಮ್ಯಾನ್ ವೃತ್ತ’ ಮತ್ತು ರಸ್ತೆಗೆ ‘ಮುಖ್ಯ ಅಂಚೆ ಕಚೇರಿ ರಸ್ತೆ’ ಎಂದು ಮರುನಾಮಕರಣ ಮಾಡುವ ಮೂಲಕ ಪೋಸ್ಟ್ ಮ್ಯಾನ್‍ಗಳ ಸೇವೆಗೆ ಗೌರವ ಸೂಚಿಸಲಾಗಿದೆ ಎಂದು ಅಖಿಲ ಭಾರತ ಅಂಚೆ ಇಲಾಖಾ ನೌಕರರ ಸಂಘದ ಕೊಡಗು ವಿಭಾಗದ ಕಾರ್ಯದರ್ಶಿ ಬೇಬಿ ಜೋಸೆಫ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬೇಬಿ ಜೋಸೆಫ್ ಅವರ ನೇತೃತ್ವದಲ್ಲಿ ಪ್ರಮುಖರಾದ ಹರಿನಾಥ್ ಕುಮಾರ್, ಕೆ.ಎಚ್.ಮೂಸ, ಟಿ.ಕೆ.ಮಂಜು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News