ನಮಗೆ ಸರಿಸಾಟಿ ಇಲ್ಲ ಅನ್ನೋ ಮೋದಿಗೆ ಪಶ್ಚಿಮ ಬಂಗಾಳದ ಸಮಾವೇಶ ಉತ್ತರ ಕೊಟ್ಟಿದೆ: ಸಿಎಂ ಕುಮಾರಸ್ವಾಮಿ

Update: 2019-01-19 17:57 GMT

ಮೈಸೂರು, ಜ. 19: ನಮಗೆ ಯಾರು  ಸರಿಸಾಟಿ ಇಲ್ಲ ಅನ್ನೋ ಬಾವನೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳದ ಜನರು ಇಂದಿನ ಸಮಾವೇಶದಲ್ಲಿ ತಕ್ಕ ಉತ್ತರಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನ ಸಮಾವೇಶ ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ದಿಗಳಲ್ಲೇ ನಡೆದ ಬೃಹತ್ ಸಮಾವೇಶ ಇದಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಅಲೆ ಏನು ಎಂದು ನಾನು ಕಂಡೆ, ಕೇಂದ್ರದ ಬಿಜೆಪಿ ನಾಯಕರು ನಮಗೆ ಪರ್ಯಾಯ ನಾಯಕರೇ ಇಲ್ಲ ಎಂದು ಭಾವಿಸಿದ್ದರು. ಇಂದಿನ ಸಮಾವೇಶ ನೋಡಿದರೆ ಅವರಿಗೆ ಭಯವಾಗುತ್ತಿದೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಎದುರಿಸಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಬಿಜೆಪಿಯೇತರ ಪಕ್ಷಗಳು ಒಂದಾಗುತ್ತಿವೆ. ಬಿಜೆಪಿಯವರಿಗೆ ಮುಂದಿನ ಲೋಕಸಭಾ ಚುನಾವಣೆ ಅಷ್ಟು ಸುಲಭವಾಗಿರುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News