ಮೃತಪಟ್ಟ ನನ್ನ ಪುತ್ರನಿಗೆ ನ್ಯಾಯ ನೀಡಿ: ಅಳಲಿಗೆ ಕಿವಿಗೊಡದ ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದ ತಾಯಿ

Update: 2019-01-20 11:35 GMT

ಲಕ್ನೋ, ಜ.20: ಸಾವಿಗೀಡಾದ ತನ್ನ ಪುತ್ರನಿಗೆ ನ್ಯಾಯ ಒದಗಿಸುವಂತೆ ಕೋರಿ ಹಿರಿಯ ಮಹಿಳೆಯೊಬ್ಬರು ಗೋಗರೆಯುತ್ತಾ ಪೊಲೀಸ್ ಅಧಿಕಾರಿಯ ಕಾಲಿಗೆ ಬೀಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್ ಆದ ನಂತರ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಯ ಅನುಚಿತ ವರ್ತನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಕ್ಷಿ ಕಾ ತಲಬ್ ನ ನಿವಾಸಿಯಾಗಿರುವ ಆಕಾಶ್ ಯಾದವ್ ಇಲ್ಲಿನ ಪ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಫ್ಯಾಕ್ಟರಿಯ ಮೆಷಿನ್ ಒಂದಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಕಾರ್ಖಾನೆಯ ಮಾಲಕನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಕಾಶ್ ನ ತಾಯಿ ಬಯಸಿದ್ದರು.

ಆಕೆ ಗುಡಾಂಬ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆದರೆ ಪೊಲೀಸ್ ಅಧಿಕಾರಿ ಇದಕ್ಕೆ ಕಿವಿಗೊಡಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆ ಅಳುತ್ತಾ, ಬೇಡುತ್ತಾ ಕೈಮುಗಿಯುತ್ತಾ ಮನವಿ ಮಾಡಿದರು. ಕೊನೆಗೆ ಪೊಲೀಸ್ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡದಾಗ ಅಧಿಕಾರಿಯ ಕಾಲಿಗೆ ಬಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News