ಕನ್ನಡ ಅನುವಾದ ಕಮ್ಮಟಕ್ಕೆ ಆಹ್ವಾನ

Update: 2019-01-22 17:09 GMT

ಬೆಂಗಳೂರು, ಜ.22: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ರಾಯಚೂರಿನಲ್ಲಿ ಮಾ.8 ರಿಂದ 10ರವರೆಗೆ ಹೊಸ ಶತಮಾನದ ಯುವ ಕಾವ್ಯ ಕನ್ನಡ ಉರ್ದು, ಉರ್ದು ಕನ್ನಡ ಅನುವಾದ ಕಮ್ಮಟ ಏರ್ಪಡಿಸಲಾಗಿದೆ.

ಮೂರು ದಿನಗಳ ಈ ಕಮ್ಮಟದಲ್ಲಿ ಆಸಕ್ತ ಅನುವಾದಕರು ಭಾಗವಹಿಸಬಹುದು. ಆಸಕ್ತರು ಅನುವಾದ ಕ್ಷೇತ್ರದಲ್ಲಿನ ತಮ್ಮ ಆಸಕ್ತಿ ಮತ್ತು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ವಿವರಗಳನ್ನು ಫೆ.15ರೊಳಗಾಗಿ ರಿಜಿಸ್ಟ್ರಾರ್ ಅಥವಾ ಅಧ್ಯಕ್ಷರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಮಲ್ಲತ್ತಹಳ್ಳಿ, ಬೆಂಗಳೂರು- 5600056 ಇಲ್ಲಿಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ: 080-23183311, 23183312 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News