ಹನೂರು ಕಾಂಗ್ರೆಸ್ ಕಚೇರಿಯಲ್ಲಿ ಶಿವಕುಮಾರ ಸ್ವಾಮೀಜಿಗೆ ಶ್ರದ್ದಾಂಜಲಿ ಸಭೆ

Update: 2019-01-22 17:28 GMT

ಹನೂರು,ಜ.22: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ನಿಧನರಾಗಿದ್ದು, ಇಂದು ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.

ಶ್ರೀಗಳ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ ಮೌನಚಾರಣೆ ನಡೆಸಲಾಯಿತು. ಬಳಿಕ ಮಾತನಾಡಿದ ಶಾಸಕ ನರೇಂದ್ರ, ಡಾ. ಶಿವಕುಮಾರ ಸ್ವಾಮೀಜಿಯವರು ತಮ್ಮ ಜೀವನದ ಉದ್ದಕೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದಂತಃಹ ಕೊಡುಗೆ ಅಪಾರ. ಶ್ರೀಗಳ ನಿಧನ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ. ಈ ಮಹಾ ಪುರುಷನ ಅಗಲಿಕೆಯ ನೋವನ್ನು ದೇಶ ವಿದೇಶದಲ್ಲಿರುವ ಅವರ ಅಪಾರ ಭಕ್ತವೃಂದಕ್ಕೆ ಭರಿಸುವ ಶಕ್ತಿ ನೀಡಲೆಂದು ಹಾಗೂ ಇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಚಾಮುಲ್ ಅಧ್ಯಕ್ಷ ಸಿಎನ್ ಗುರುಮಲ್ಲಪ್ಪ, ಜಿಪಂ ಸದಸ್ಯೆ ಮರಗದಣಿ, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯ ಜವಾದ್ ಅಹಮದ್ ನಟರಾಜು, ಪಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಬಸವರಾಜು, ರೋಟರಿ ಅಧ್ಯಕ್ಷ ಗಿರೀಶ್, ಮುಖಂಡ ಶ್ರೀನಿವಾಸ್‍ಗೌಡ, ನಟರಾಜು, ಮುರುಡೇಶ್ವರ್, ಬಸವರಾಜು ಈಶ್ವರ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News